ನವದೆಹಲಿ: ಇರಾನ್ನಲ್ಲಿ ಸಿಲುಕಿರುವ ಹೆಚ್ಚಿನ ಭಾರತೀಯರು ನೆರೆಯ ದೇಶಗಳ ಭೂ ಮಾರ್ಗಗಳ ಮೂಲಕ ಸ್ವದೇಶಕ್ಕೆ ಮರಳಿದ್ದಾರೆ. ಭಾರತೀಯ ರಾಯಭಾರಿಗಳ ನೆರವಿನ ಮೂಲಕ ಸ್ಥಳಾಂತರ ಪ್ರಕ್ರಿಯೆ ಮುಂದುವರೆದಿದೆ ಎಂದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ತಿಳಿಸಿದೆ.
ಅಂತರ ಸಚಿವಾಲಯದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಂಇಎ ವಕ್ತಾರ ರಣಧೀರ್ ಜೈಸ್ವಾಲ್, ಅರ್ಮೇನಿಯಾ ಮತ್ತು ಅಜರ್ ಬೈಜಾನ್ ಮೂಲಕ ಇರಾನ್ನಿಂದ ನಿರ್ಗಮಿಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ.
ಈ ಮೊದಲೇ ಹೇಳಿದಂತೆ, ಇರಾನ್ನಲ್ಲಿರುವ ಅನೇಕ ಭಾರತೀಯ ನಾಗರಿಕರು ಅರ್ಮೇನಿಯಾ ಮತ್ತು ಅಜರ್ಬೈಜಾನ್ ಮೂಲಕ ದೇಶಕ್ಕೆ ಮರಳುತ್ತಿದ್ದಾರೆ. ಅದರಲ್ಲಿ ಈಗ 913 ಭಾರತೀಯ ನಾಗರಿಕರು ಅರ್ಮೇನಿಯಾ ಮತ್ತು ಅಜರ್ಬೈಜಾನ್ನಲ್ಲಿ ಇರಾನ್ನಿಂದ ರಾಯಭಾರಿ ಕಚೇರಿಯ ಸಹಾಯದಿಂದ ಗಡಿ ದಾಟಿದ್ದಾರೆ. ಅವರಲ್ಲಿ ಅನೇಕ ಜನರು ಮರಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಇರಾನ್ನಲ್ಲಿ ಸಿಲುಕಿಕೊಂಡಿದ್ದ ಎಲ್ಲಾ ಭಾರತೀಯ ಯಾತ್ರಿಕರು ಈಗ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಹಿಂದೆ ಹೇಳಿದಂತೆ 284 ಯಾತ್ರಿಕರು ಅಲ್ಲಿ ಸಿಲುಕಿಕೊಂಡಿದ್ದರು. ಆ ಎಲ್ಲಾ 284 ಯಾತ್ರಿಕರು ಈಗ ಭಾರತಕ್ಕೆ ಮರಳಿದ್ದಾರೆ" ಎಂದು ಅವರು ಮಾಹಿತಿ ನೀಡಿದರು.
ಸಹಾಯವಾಣಿ ಕುರಿತು ಮಾಹಿತಿ ನೀಡಿದ ಅವರು, ಮಾಹಿತಿ ಮತ್ತು ಬೆಂಬಲ ಬಯಸುತ್ತಿರುವ ಜನರಿಂದ ಸೀಮಿತ ಸಂಖ್ಯೆಯ ಕರೆಗಳನ್ನು ಸ್ವೀಕರಿಸಿದೆ. ನಿನ್ನೆಯವರೆಗೂ MEA ನಿಯಂತ್ರಣ ಕೊಠಡಿಗೆ ಒಟ್ಟು 10 ದೂರವಾಣಿ ಕರೆಗಳು ಮತ್ತು ಆರು ಇಮೇಲ್ ಬಂದಿವೆ. ಇವೆಲ್ಲವೂ ಹೆಚ್ಚಾಗಿ ವ್ಯಾಪಾರಿ ಹಡಗುಗಳಲ್ಲಿ ಸಿಲುಕಿರುವ ಭಾರತೀಯ ನಾಗರಿಕರ ಬಗ್ಗೆ ಮಾಹಿತಿ ಕೋರಿ ಬಂದ ಕರೆಗಳಾಗಿವೆ ಎಂದು ತಿಳಿಸಿದರು.