ಡೊನಾಲ್ಡ್ ಟ್ರಂಪ್ 
ವಿದೇಶ

ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತೆ: ಇರಾನ್ ವಿರುದ್ಧ ಮತ್ತೆ ದಾಳಿ ಕುರಿತಂತೆ ಟ್ರಂಪ್ ಎಚ್ಚರಿಕೆ

ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ವರದಿಗಳಿವೆ. ಇದೆಲ್ಲದರ ನಡುವೆ ಟ್ರಂಪ್ ತಮ್ಮ ಟ್ರೂಥ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ.

ವಾಷಿಂಗ್ಟನ್: ಅಮೆರಿಕ ಮತ್ತೊಮ್ಮೆ ಇರಾನ್ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಉನ್ನತ ಅಧಿಕಾರಿಗಳೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ ಎಂಬ ವರದಿಗಳಿವೆ. ಇದೆಲ್ಲದರ ನಡುವೆ ಟ್ರಂಪ್ ತಮ್ಮ ಟ್ರೂಥ್ ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದು ಇದಕ್ಕೆ ಪುಷ್ಠಿ ಕೊಡುವಂತಿದೆ. ಚಂಡಮಾರುತಕ್ಕೂ ಮೊದಲು ಶಾಂತವಾಗಿರುತ್ತದೆ ಎಂಬುದನ್ನು ತೋರಿಸುವ AI ಆಧಾರಿತ ಚಿತ್ರವನ್ನು ಟ್ರಂಪ್ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಟ್ರಂಪ್ "ಮೇಕ್ ಅಮೇರಿಕಾ ಗ್ರೇಟ್ ಅಗೇನ್" ಟೋಪಿ ಧರಿಸಿರುವುದನ್ನು ಕಾಣಬಹುದು. ಅದರ ಪಕ್ಕದಲ್ಲಿ ಯುಎಸ್ ನೌಕಾಪಡೆಯ ಅಡ್ಮಿರಲ್ ಇದ್ದಾರೆ. ಇಬ್ಬರೂ ನೌಕಾಪಡೆಯ ಹಡಗಿನಲ್ಲಿ ಉಬ್ಬರವಿಳಿತದ ಅಲೆಗಳು ಮತ್ತು ಮಿಂಚಿನ ನಡುವೆ ಕಾಣಿಸಿಕೊಂಡಿದ್ದಾರೆ. ಹಿನ್ನೆಲೆಯಲ್ಲಿ ಇರಾನ್ ಹಡಗುಗಳು ಗೋಚರಿಸುತ್ತಿವೆ.

ಮಧ್ಯಪ್ರಾಚ್ಯದಲ್ಲಿ ಕದನ ವಿರಾಮ ಜಾರಿಯಲ್ಲಿರುವ ಸಮಯದಲ್ಲಿ ಟ್ರಂಪ್ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಆದರೆ ಪ್ರಮುಖ ಹಾರ್ಮುಜ್ ಜಲಸಂಧಿ ಸಮುದ್ರ ಮಾರ್ಗದ ಮೇಲಿನ ಉದ್ವಿಗ್ನತೆ ಸಡಿಲಗೊಳ್ಳುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಶಾಂತಿ ಒಪ್ಪಂದ ಶೀಘ್ರದಲ್ಲೇ ತಲುಪದಿದ್ದರೆ ಮುಂದೆ ಭೀಕರ ಸಮಯ ಎದುರಾಗಬಹುದು ಎಂದು ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದರು.

ಇರಾನ್ ಏನು ಹೇಳಿದೆ?

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಶುಕ್ರವಾರ ತಮ್ಮ ಸರ್ಕಾರವು ಟ್ರಂಪ್ ಆಡಳಿತದಿಂದ ಹೊಸ ಮಾತುಕತೆಗಳಿಗೆ ಸಿದ್ಧತೆಯನ್ನು ಸೂಚಿಸುವ ಸಂದೇಶಗಳನ್ನು ಸ್ವೀಕರಿಸಿದೆ ಎಂದು ಹೇಳಿದರು. ಆದರೆ ವಾಷಿಂಗ್ಟನ್‌ನ ನಿಜವಾದ ಉದ್ದೇಶಗಳ ಬಗ್ಗೆ ಅಪನಂಬಿಕೆ ಉಳಿದಿದೆ ಎಂದು ಅವರು ಎಚ್ಚರಿಸಿದರು. ಕಳೆದ ತಿಂಗಳು ಕದನ ವಿರಾಮಕ್ಕೆ ಒಪ್ಪಿಗೆ ಸಿಕ್ಕಿದ್ದರೂ, ಶಾಶ್ವತ ಶಾಂತಿ ಒಪ್ಪಂದವು ದೂರದ ಗುರಿಯಾಗಿ ಉಳಿದಿದೆ. ಗಲ್ಫ್ ಪ್ರದೇಶದಲ್ಲಿ ತನ್ನ ಕೆಲವು ಪ್ರಮುಖ ಯುದ್ಧನೌಕೆಗಳ ನಿಯೋಜನೆಯನ್ನು ಅಮೆರಿಕ ಉಳಿಸಿಕೊಂಡಿದೆ. ಆದಾಗ್ಯೂ, ವಿಶ್ವದ ಅತಿದೊಡ್ಡ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್, 11 ತಿಂಗಳ ನಿಯೋಜನೆಯ ನಂತರ ಮನೆಗೆ ಮರಳಿದೆ.

https://truthsocial.com/@realDonaldTrump/posts/116586041697060377

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜನರಲ್ ದ್ವಿವೇದಿ ಹೇಳಿಕೆ 'ಪ್ರಚೋದನಕಾರಿ'; ಇದು ವಿನಾಶಕ್ಕೆ ಕಾರಣವಾಗಬಹುದು: ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಬೆಂಗಳೂರು: ಪೊಲೀಸರ ಭದ್ರತೆ ನಡುವೆ ನಿರಾಶ್ರಿತ ಕೇಂದ್ರದಿಂದ ನಾಲ್ವರು ವಿದೇಶಿ ಅಕ್ರಮ ಮಹಿಳಾ ವಲಸಿಗರು ಪರಾರಿ!

ಬೆಂಗಳೂರು: ಮಾಜಿ ಉಪ ಮೇಯರ್ ಸೊಸೆಯ ಕಾರನ್ನು ತಡೆದು ಕಿರುಕುಳ, ಆಕೆಯ ಪತಿ ಮೇಲೂ ಹಲ್ಲೆ!

ಬೇಲ್ ಫಸ್ಟ್ ಲುಕ್ ರಿಲೀಸ್ : ಸಾಲ್ಟ್ ಅಂಡ್‌ ಪೆಪ್ಪರ್ ಲುಕ್ ಶಿವಣ್ಣ, ವರಮಹಾಲಕ್ಷ್ಮಿ ಹಬ್ಬಕ್ಕೆ ಸಿನಿಮಾ ರಿಲೀಸ್ ! Video

'ರಾಹುಲ್, ಪ್ರಿಯಾಂಕಾ ವಯನಾಡನ್ನು ಮರೆತುಬಿಡಿ': ಗಾಂಧಿಗಳಿಗೆ ಎಚ್ಚರಿಕೆ ನೀಡುವ ಪೋಸ್ಟರ್‌ಗಳ ವಿರುದ್ಧ ಕೇಸ್!

SCROLL FOR NEXT