ಕೇರಳದಲ್ಲಿ ಪ್ರದರ್ಶನವೇ ಕಾಣದ ಮಲೇಟ್ಟಂ ಚಿತ್ರಕ್ಕೆ ಚಿತ್ರೋತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ

ಕೇರಳದಲ್ಲಿ ಪ್ರದರ್ಶನವೇ ಕಾಣದ ಮಲಯಳಾಂ ಚಿತ್ರ ಮಲೇಟ್ಟಂಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಥಾಮಸ್ ದೇವಸ್ಯ ಅವರು ಹೇಳಿದ್ದಾರೆ..
ಮಲೇಟ್ಟಂ ಚಿತ್ರ ನಿರ್ದೇಶಕ ಥಾಮಸ್ ದೇವಸ್ಯ
ಮಲೇಟ್ಟಂ ಚಿತ್ರ ನಿರ್ದೇಶಕ ಥಾಮಸ್ ದೇವಸ್ಯ

ಬೆಂಗಳೂರು: ಕೇರಳದಲ್ಲಿ ಪ್ರದರ್ಶನವೇ ಕಾಣದ ಮಲಯಳಾಂ ಚಿತ್ರ ಮಲೇಟ್ಟಂಗೆ ಬೆಂಗಳೂರು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಚಿತ್ರದ ನಿರ್ದೇಶಕ ಥಾಮಸ್ ದೇವಸ್ಯ ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೇಟ್ಟಂ ಚಿತ್ರ ಕೇರಳದ ಸಮಸ್ಯೆಗಳನ್ನು ಕೇಂದ್ರೀಕರಿಸಿ ತಯಾರಿಸಲಾದ ಚಿತ್ರವಾಗಿದ್ದು, ಅಲ್ಲಿನ ಮಾಫಿಯಾ ಕೇರಳದ ನೈಸರ್ಗಿಕ ಸಂಪತ್ತಿನ ಮೇಲೆ ಮಾಡುತ್ತಿರುವ ಅತ್ಯಾಚಾರವನ್ನು ಚಿತ್ರದಲ್ಲಿ ಚಿತ್ರಿಸಲಾಗಿದೆ. ಇದೇ ಕಾರಣಕ್ಕೆ ತಮ್ಮ ಚಿತ್ರಕ್ಕೆ ಕೇರಳದಲ್ಲಿ ಪರೋಕ್ಷವಾಗಿ ನಿರ್ಬಂಧ ಹೇರಲಾಗಿದೆ. ಸ್ಥಳೀಯ ಪ್ರಭಾವಿಗಳು ತಮ್ಮ ಚಿತ್ರಕ್ಕೆ ಕೇರಳದಲ್ಲಿ ಮನ್ನಣೆ ದೊರೆಯದಂತೆ ಮಾಡಿದ್ದಾರೆ ಎಂದು ಥಾಮಸ್ ದೇವಸ್ಯ ತಮ್ಮ ಅಳಲು ತೋಡಿಕೊಂಡರು.

ಆದರೆ ಬೆಂಗಳೂರು ಚಿತ್ರೋತ್ಸವದಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಈ ಹಿಂದೆ ಕೋಲ್ಕತಾದಲ್ಲಿ ನಡೆದ ಚಿತ್ರೋತ್ಸವದಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಥಾಮಸ್ ದೇವಸ್ಯ ಸಂತಸ ಹಂಚಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com