ಕೃಷಿ ಕ್ಷೇತ್ರಕ್ಕೆ 4,346 ಕೋಟಿ ರುಪಾಯಿ ಅನುದಾನ

2016-17ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಹಿತಾದೃಷ್ಟಿಯಿಂದ ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ...
ರೈತ
ರೈತ
Updated on

ಬೆಂಗಳೂರು: 2016-17ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರ ಹಿತಾದೃಷ್ಟಿಯಿಂದ ರಾಜ್ಯದಲ್ಲಿ ಶೀಘ್ರದಲ್ಲೇ ಸುವರ್ಣ ಕೃಷಿ ಯೋಜನೆ ಜಾರಿ ತಂದು ಆ ಮೂಲಕ 100 ಮಾದರಿ ಕೃಷಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸುವುದಾಗಿ ಹೇಳಿದ್ದಾರೆ.

ಈ ವೇಳೆ ಕೃಷಿ ಕ್ಷೇತ್ರಕ್ಕೆ 4,346ಕೋಟಿ ರೂಪಾಯಿ ಅನುದಾನ ಹಾಗೂ ಕೃಷಿ ನವೋದ್ಯಮ ಯೋಜನೆಗೆ 10 ಕೋಟಿ ಅನುದಾನವನ್ನು ಘೋಷಿಸಿದ ಸಿದ್ದರಾಮಯ್ಯ ಘೋಷಿಸಿದ್ದಾರೆ.

* ಕೃಷಿ ಪತ್ತಿನ ಸಹಕಾರ ಸಂಘಗಳೆಲ್ಲವೂ ಗಣಕೀಕರಣಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

* ಮೇಕೆ ಮತ್ತು ಕುರಿಗಳಿಗೆ ಕೃತಕ ಗರ್ಭಧಾರಣೆಗಾಗಿ ವೀರ್ಯ ಬ್ಯಾಂಕ್‌ ಸ್ಥಾಪನೆ. ಮೇಕೆ ಹಾಲಿಗೆ ಪ್ರೋತ್ಸಾಹ.

* ಕೆಎಂಎಫ್ ಸಂಪೂರ್ಣ ಹೂಡಿಕೆಯೊಂದಿಗೆ ಹಾಸನದಲ್ಲಿ ಪಶು ಆಹಾರ ಕೇಂದ್ರ 2015-16 ರ ಸಾಲಿನಲ್ಲಿ ಪಶುಸಂಗೋಪನಾ ಇಲಾಖೆಗೆ 1,886 ಕೋಟಿ ರೂ ಒದಗಿಸಲಾಗಿದೆ.

* ದೇಸಿ ಗೋ ವಂಶದ ವೀರ್ಯ ಬ್ಯಾಂಕ್‌ ಸ್ಥಾಪನೆ. ಸ್ಥಳೀಯ ತಳಿ ಅಭಿವೃದ್ದಿಗಾಗಿ 5 ಕೋಟಿ ರೂಪಾಯಿ.

* ಮತ್ಸಾಶ್ರಯ ಯೋಜನೆ ಅಡಿ ವಸತಿ ರಹಿತ ಮೀನುಗಾರರಿಗೆ ಮನೆಗಳ ನೀರ್ಮಾಣ. ಮಂಗಳೂರಿನ ಪಿಲಿಕುಳದಲ್ಲಿ 15 ಕೋಟಿ ರು. ಓಷನೇನಿಯಂ ನಿರ್ಮಾಣ.ಮಹಿಳಾ ಮೀನುಗಾರರಿಗೆ ಎಪ್ರಾನ್‌ ,ಗ್ಲೌಸ್‌, ಬುಟ್ಟಿ ನೀಡಲು 1 ಕೋಟಿ ರು ಬಿಡುಗಡೆ

* ಮೀನುಗಾರಿಕೆಗೆ 302 ಕೋಟಿ, ಮೀನುಗಾರಿಕೆ ಅಭಿವೃದ್ದಿಗೆ ಕ್ರಮ. ಬಂದರುಗಳು ಹೂಳೆತ್ತಲು, ತಡೆಗೋಡೆ ನಿರ್ಮಾಣಕ್ಕೆ ಹಣ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com