ಕೇಂದ್ರ ಬಜೆಟ್ 2023-24: ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ; ಪ್ರಗತಿ ಶ್ಲಾಘಿಸಿದ ನಿರ್ಮಲಾ ಸೀತಾರಾಮನ್
ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ ಮಾಡಿದೆ ಎಂದು ದೇಶದ ಪ್ರಗತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023-24 ಮಂಡನೆ ವೇಳೆ ಶ್ಲಾಘಿಸಿದ್ದಾರೆ.
Published: 01st February 2023 02:02 PM | Last Updated: 01st February 2023 07:48 PM | A+A A-

ಡಿಜಿಟಲ್ ಪಾವತಿ
ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಭಾರತ ಕ್ರಾಂತಿ ಮಾಡಿದೆ ಎಂದು ದೇಶದ ಪ್ರಗತಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ 2023-24 ಮಂಡನೆ ವೇಳೆ ಶ್ಲಾಘಿಸಿದ್ದಾರೆ.
ಬಜೆಟ್ ಮಂಡನೆ ವೇಳೆ ನಿರ್ಮಲಾ ಸೀತಾರಾಮನ್ ಅವರು "ಹಲವು ಯೋಜನೆಗಳ ಸಮರ್ಥ ಅನುಷ್ಠಾನ" ದ ಮೂಲಕ ಕೇಂದ್ರದ ಸಾಧನೆಗಳನ್ನು ಗಮನಸೆಳೆದರು, ಇದು ಅಂತರ್ಗತ ಅಭಿವೃದ್ಧಿಗೆ ಕಾರಣವಾಯಿತು ಎಂದು ಅಭಿಪ್ರಾಯಪಟ್ಟ ಅವರು, ಡಿಜಿಟಲ್ ಪಾವತಿಗಳಲ್ಲಿ ಗಮನಾರ್ಹವಾದ ವರ್ಧನೆಯಿಂದ ಭಾರತದ ಆರ್ಥಿಕತೆಯು ಹೆಚ್ಚು ಔಪಚಾರಿಕವಾಗಿದೆ ಎಂದು ಬುಧವಾರ ಸಂಸತ್ತಿನಲ್ಲಿ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023-24: 'ಧೂಮಪಾನಿಗಳೇ ಗಮನಿಸಿ': ಜೇಬಿಗೆ ಕತ್ತರಿ ಹಾಕಲಿದೆ ಸಿಗರೇಟ್; ಶೇ.16ಕ್ಕೆ ಸುಂಕ ಹೆಚ್ಚಳ
ವರ್ಷಗಳಲ್ಲಿ ಡಿಜಿಟಲ್ ಪಾವತಿಗಳಲ್ಲಿ ತಂದ ವರ್ಧನೆಯನ್ನು ಅವರು ಶ್ಲಾಘಿಸಿದರು. 2022 ರಲ್ಲಿ ಯುಪಿಐ ಮೂಲಕ 126 ಲಕ್ಷ ಕೋಟಿ ರೂ ಮೌಲ್ಯದ ಸುಮಾರು 7,400 ಕೋಟಿ ಡಿಜಿಟಲ್ ಪಾವತಿಗಳನ್ನು ಮಾಡಲಾಗಿದೆ ಎಂದು ಅವರು ಸದನದ ಗಮನಕ್ಕೆ ತಂದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಹಿತಿಯ ಪ್ರಕಾರ, ಸೆಪ್ಟೆಂಬರ್ 2022 ರವರೆಗೆ ದೇಶದಾದ್ಯಂತ ಡಿಜಿಟಲ್ ಪಾವತಿಗಳು ಒಂದು ವರ್ಷದಲ್ಲಿ ಶೇ.24.13% ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. ಹೊಸದಾಗಿ ರಚಿತವಾದ RBI ಯ ಡಿಜಿಟಲ್ ಪಾವತಿ ಸೂಚ್ಯಂಕವು (RBI-DPI) 2022 ರ ಸೆಪ್ಟೆಂಬರ್ನಲ್ಲಿ 377.46 ರಷ್ಟಿದ್ದು ಮಾರ್ಚ್ನಲ್ಲಿ 349.30 ರಷ್ಟಿತ್ತು. 2022 ಮತ್ತು ಸೆಪ್ಟೆಂಬರ್ 2021 ರಲ್ಲಿ 304.06 ರೂ ನಷ್ಟಿತ್ತು ಎಂದು ಅವರು ಮಾಹಿತಿ ನೀಡಿದರು.
ಇದನ್ನೂ ಓದಿ: 'ಸಿರಿಧಾನ್ಯ... ಶ್ರೀ ಅನ್ನ', ಭಾರತವನ್ನು ಸಿರಿಧಾನ್ಯ ತವರಾಗಿಸಲು ವಿತ್ತ ಸಚಿವರ ಪಣ
"ಆರ್ಬಿಐ-ಡಿಪಿಐ ಸೂಚ್ಯಂಕವು ಎಲ್ಲಾ ನಿಯತಾಂಕಗಳಾದ್ಯಂತ ಪಾವತಿ ಮೂಲಸೌಕರ್ಯದಲ್ಲಿನ ಗಮನಾರ್ಹ ಬೆಳವಣಿಗೆ ಮತ್ತು ಅವಧಿಯಲ್ಲಿ ದೇಶಾದ್ಯಂತ ಪಾವತಿ ಕಾರ್ಯಕ್ಷಮತೆಯಿಂದ ಹೆಚ್ಚಿದೆ" ಎಂದು ಆರ್ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಅಂತರ್ಗತ ಅಭಿವೃದ್ಧಿಗೆ ಕಾರಣವಾದ "ಹಲವು ಯೋಜನೆಗಳ ಸಮರ್ಥ ಅನುಷ್ಠಾನ" ದ ಮೂಲಕ ಕೇಂದ್ರದ ಸಾಧನೆಗಳನ್ನು ಅವರು ಮತ್ತಷ್ಟು ಗಮನಸೆಳೆದರು. ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಸುಮಾರು 47.8 ಕೋಟಿ ಪಿಎಂ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ, 11.4 ಕೋಟಿಗೂ ಹೆಚ್ಚು ರೈತರಿಗೆ 2.2 ಲಕ್ಷ ಕೋಟಿ ರೂ ನಗದು ವರ್ಗಾವಣೆ ಮಾಡಲಾಗಿದೆ ಎಂದು ಸೀತಾರಾಮನ್ ಹೇಳಿದರು.
ಬಲವಾದ ಸಾರ್ವಜನಿಕ ಹಣಕಾಸು ಮತ್ತು ದೃಢವಾದ ಹಣಕಾಸು ವಲಯದೊಂದಿಗೆ ತಂತ್ರಜ್ಞಾನ-ಚಾಲಿತ ಮತ್ತು ಜ್ಞಾನ ಆಧಾರಿತ ಆರ್ಥಿಕತೆಯನ್ನು ಸಾಧಿಸಲು 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಅತ್ಯಗತ್ಯ ಎಂದು ಹಣಕಾಸು ಸಚಿವರು ಹೇಳಿದರು.