ಸ್ಥಳೀಯರ ಜೊತೆ ಮೈಕ್ರೊಸಾಫ್ಟ್ ಕೆಲಸ

ಭಾರತದ ಗ್ರಾಮೀಣ ಪ್ರದೇಶಕ್ಕೆ ತಂತ್ರಜ್ಞಾನವನ್ನು ತಲುಪಿಸಲು ಸ್ಥಳೀಯ ಉದ್ಯಮಿಗಳೊಂದಿಗೆ ಕೆಲಸ ಮಾಡಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಭಾರತದ ಗ್ರಾಮೀಣ ಪ್ರದೇಶಕ್ಕೆ ತಂತ್ರಜ್ಞಾನವನ್ನು ತಲುಪಿಸಲು ಸ್ಥಳೀಯ ಉದ್ಯಮಿಗಳೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವುದಾಗಿ ಮೈಕ್ರೊಸಾಫ್ಟ್ ಮುಖ್ಯಕಾಯನಿರ್ವಹಣಾಧಿಕಾರಿ ಸತ್ಯ ನಾದೆಲ್ಲ ಹೇಳಿದ್ದಾರೆ. 
ತಂತ್ರಜ್ಞಾನಕ್ಕೆ ತೆಲಂಗಾಣ ಸರ್ಕಾರ ಆರಂಭಿಸಿರುವ ಟಿ-ಹಬ್‍ನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸ್ಟಾರ್ಟ್‍ಅಪ್ ಕಂಪನಿಗಳು ವೈಫಲ್ಯಗಳಿಂದ ಕಲಿಯಬೇಕೆಂದು ಹೇಳಿದರು. 
ಯಾವುದೇ ತಂತ್ರಜ್ಞಾನವನ್ನು ಬಳಸಿ ಅದು ಕೊನೆಯ ವ್ಯಕ್ತಿಯವರೆಗೂ ತಲುಪಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳೊಂದಿಗೆ ಕಾರ್ಯನಿರ್ವಹಿಸುವ ಆಸಕ್ತಿ ಹೊಂದಿದ್ದೇವೆ ಎಂದು ಹೇಳಿದರು. 
ಯಾವುದೇ ವ್ಯಕ್ತಿ ವಿಫಲತೆಗಳಿಂದ ಪಾಠ ಕಲಿತಾಗ ಮತ್ತು ತಪ್ಪುಗಳನ್ನು ಸರಿಪಡಿಸಿಕೊಂಡಾಗ ಅದನ್ನು ಸಂತೋಷ ಅನುಭವಿಸುತ್ತಾನೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com