ಅಗರ್ತಲಾ: ಬಾಂಗ್ಲಾ ಮತ್ತು ಭಾರತದ ನಡುವೆ ದೂರಸಂಪರ್ಕ ಮರುಸ್ಥಾಪಿಸುವ ಕಾರ್ಯ ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ದೂರಸಂಪರ್ಕ ಸೇವಾ ಕಂಪನಿ ಬಿಎಸ್ಎನ್ಎಲ್ ಶನಿವಾರ ಹೇಳಿದೆ.
ಇಂಟರ್ನ್ಯಾಷನಲ್ ಗೇಟ್ವೇ ಫಾರ್ ಇಂಟರ್ನೆಟ್ ಸರ್ವಿಸಸ್ ಮತ್ತು ಅಕೌರ ನಡುವೆ ಸಂಪರ್ಕ ಕಲ್ಪಿಸುವ ಈ ಕಾರ್ಯಕ್ಕೆ ಕೇಂದ್ರ ದೂರ ಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಮುಂದಿನ ವಾರ ಚಾಲನೆ ನೀಡಲಿದ್ದಾರೆ ಎಂದು ಬಿಎಸ್ಎನ್ಎಲ್ ಈಶಾನ್ಯ ವೃತ್ತದ ಮುಖ್ಯಸ್ಥ ಡಿ.ಪಿ.ಸಿಂಗ್ ತಿಳಿಸಿದ್ದಾರೆ.
Advertisement