ಐಸಿಯು ನತ್ತ ಭಾರತದ ಆರ್ಥಿಕತೆ: ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್

ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಮ್ ಆತಂಕ ವ್ಯಕ್ತಪಡಿಸಿದ್ದಾರೆ.
ಅರವಿಂದ್ ಸುಬ್ರಮಣಿಯನ್
ಅರವಿಂದ್ ಸುಬ್ರಮಣಿಯನ್
Updated on

ನವದೆಹಲಿ: ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವಿನ್ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು (ಟಿಬಿಎಸ್-ಒಂದೆಡೆ ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲ ಹೆಚ್ಚಳದ ಪರಿಣಾಮ ಬ್ಯಾಂಕ್ ಗಳ ಆದಾಯ, ಸಾಲದ ಪಟ್ಟಿ ಮತ್ತು ಇನ್ನೊಂದೆಡೆ ಸಾಲ ಪಡೆದವರ ಆದಾಯ – ಸಾಲದ ಪಟ್ಟಿಯಲ್ಲಿ ಒತ್ತಡ) ಎದುರಿಸುತ್ತಿದ್ದು ಇದು ದೇಶದ ಆರ್ಥಿಕತೆಗೆ ಮತ್ತಷ್ಟು ಅಪಾಯ ತರಲಿದೆ ಎಂದು ಅವರು ವಿವರಿಸಿದ್ದಾರೆ.

ಇದು ಸಾಮಾನ್ಯ ಮಂದಗತಿಯಲ್ಲ. ಇದು ಭಾರತದ ಮಹಾ ನಿಧಾನಗತಿಯಾಗಿದೆ, ಅಲ್ಲಿ ಆರ್ಥಿಕತೆಯು ತೀವ್ರ ನಿಗಾ ಘಟಕದತ್ತ ಸಾಗುತ್ತಿದೆ ಎಂದು ತೋರುತ್ತದೆ ಎಂದು ಹೇಳಿದರು. 

ಟಿಬಿಎಸ್ ಬಿಕ್ಕಟ್ಟು 2004-2011ರ ಆರ್ಥಿಕ ಉತ್ಕರ್ಷದ ಸಮಯದಲ್ಲಿ ಕಂಪನಿಗಳು ಬ್ಯಾಂಕುಗಳಿಂದ ಸಾಲ ಪಡೆದಾಗ ಸೂಚಿಸುತ್ತದೆ. ಆದರೆ ಆರ್ಥಿಕತೆಯು ಕುಸಿತದ ನಂತರ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಬ್ಯಾಂಕುಗಳೊಂದಿಗಿನ ಶೇಕಡಾವಾರು ನಿಷ್ಕ್ರಿಯ ಆಸ್ತಿಗಳು(ಎನ್‌ಪಿಎ) ಹೆಚ್ಚಿವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com