ನವದೆಹಲಿ: ಖ್ಯಾತ ಗಾಯಕ ಶಂಕರ ಮಹದೇವನ್ ಗೆ ಹೃದಯಾಘಾತವಾಗಿದೆ. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದೆ.
ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಶಂಕರ್ ಮಹಾದೇವನ್ `ಕಳೆದ ಕೆಲ ದಿನಗಳಿಂದ ನಿಮ್ಮೆಲ್ಲರ ಕಾಳಜಿ ಮತ್ತು ಪ್ರಾರ್ಥನೆ ಕಂಡು ನಾನು ಕೃತಜ್ಞನಾಗಿದ್ದೇನೆ.
ಅತ್ಯುತ್ತಮ ಚಿಕಿತ್ಸೆ ಮತ್ತು ನಿಮ್ಮೆಲ್ಲರ ಹಾರೈಕೆಯಿಂದ ಬೇಗ ಗುಣಮುಖನಾಗುತ್ತಿದ್ದೇನೆ. ಮತ್ತೆ ನಿಮ್ಮೆದುರು ಶೀಘ್ರ ಬರಲಿದ್ದೇನೆ' ಎಂದಿದ್ದಾರೆ. ಕೆಲಸದ ಒತ್ತಡ ಮತ್ತು ದಣಿವಿನಿಂದಾಗಿ ಹೃದಯಾಘಾತ ಆಗಿರಬಹುದೆಂದು ಶಂಕರ ಮಹದೇವನ್ ಮಗ ಸಿದ್ಧಾರ್ಥ ತಿಳಿಸಿದ್ದಾರೆ.