ಮುಂಬೈ/ವಾರಾಣಸಿ: ಗುದ್ದೋಡು, ಕೃಷ್ಣ ಮೃಗ ಬೇಟೆ ಪ್ರಕರಣಗಳಲ್ಲಿ ಸಿಲುಕಿ ನಲುಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ಗೆ ಮತ್ತೊಂದು ಆಘಾತ. `ವೀರ್' ಚಿತ್ರದ ನಿರ್ಮಾಪಕ ವಿಜಯ್ ಗಲಾನಿ ಸಲ್ಮಾನ್ ಖಾನ್ ವಿರುದ್ಧ ರು.250 ಕೋಟಿಯ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.
ವೀರ್ ಚಿತ್ರದ ಹಣಕಾಸು ಒಪ್ಪಂದಕ್ಕೆ ಸಂಬಂಧಿಸಿ ಗಲಾನಿ ಹಾಗೂ ಸಲ್ಮಾನ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿವಾದ ನಂತರ ಚಲನಚಿತ್ರ ಕಲಾವಿದರ ಸಂಘ ಹಾಗೂ ಪಶ್ಚಿಮ ಭಾರತ ಚಲನಚಿತ್ರ ಮಂಡಳಿಯ ಮೆಟ್ಟಿಲೇರಿತ್ತು. ಸಂಘವು ಗಲಾನಿ ವಿರುದ್ಧ ಅಸಹಕಾರ ನೋಟಿಸ್ ಕೂಡ ಜಾರಿ ಮಾಡಿತ್ತು.
``ಸಲ್ಮಾನ್ರನ್ನು ಓಲೈಸಲು ನನ್ನ ವಿರುದ್ಧ ಈ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ ನನಗೆ ಕಳೆದ 3 ವರ್ಷಗಳಿಂದ ಮಾನಸಿಕ ಯಾತನೆ, ಕಿರುಕುಳ, ಮರ್ಯಾದೆಗೆ ಭಂಗ ಉಂಟಾಗಿದೆ. ಹೀಗಾಗಿ ಸಲ್ಮಾನ್ ವಿರುದ್ಧ ರು. 250 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ'' ಎಂದಿದ್ದಾರೆ ಗಲಾನಿ.
Advertisement