ಸಲ್ಮಾನ್ ವಿರುದ್ಧ ಮತ್ತೊಂದು ಕೇಸ್

ಗುದ್ದೋಡು, ಕೃಷ್ಣ ಮೃಗ ಬೇಟೆ ಪ್ರಕರಣಗಳಲ್ಲಿ ಸಿಲುಕಿ ನಲುಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಮತ್ತೊಂದು ಆಘಾತ. `ವೀರ್' ಚಿತ್ರದ ನಿರ್ಮಾಪಕ...
ಬಾಲಿವುಡ್ ನಟ ಸಲ್ಮಾನ್ ಖಾನ್‍
ಬಾಲಿವುಡ್ ನಟ ಸಲ್ಮಾನ್ ಖಾನ್‍
Updated on

ಮುಂಬೈ/ವಾರಾಣಸಿ: ಗುದ್ದೋಡು, ಕೃಷ್ಣ ಮೃಗ ಬೇಟೆ ಪ್ರಕರಣಗಳಲ್ಲಿ ಸಿಲುಕಿ ನಲುಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್‍ಗೆ ಮತ್ತೊಂದು ಆಘಾತ. `ವೀರ್' ಚಿತ್ರದ ನಿರ್ಮಾಪಕ ವಿಜಯ್ ಗಲಾನಿ ಸಲ್ಮಾನ್ ಖಾನ್ ವಿರುದ್ಧ ರು.250 ಕೋಟಿಯ ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ವೀರ್ ಚಿತ್ರದ ಹಣಕಾಸು ಒಪ್ಪಂದಕ್ಕೆ ಸಂಬಂಧಿಸಿ ಗಲಾನಿ ಹಾಗೂ ಸಲ್ಮಾನ್ ನಡುವೆ ಮನಸ್ತಾಪ ಉಂಟಾಗಿತ್ತು. ಈ ವಿವಾದ ನಂತರ ಚಲನಚಿತ್ರ ಕಲಾವಿದರ ಸಂಘ ಹಾಗೂ ಪಶ್ಚಿಮ ಭಾರತ ಚಲನಚಿತ್ರ ಮಂಡಳಿಯ ಮೆಟ್ಟಿಲೇರಿತ್ತು. ಸಂಘವು ಗಲಾನಿ ವಿರುದ್ಧ ಅಸಹಕಾರ ನೋಟಿಸ್ ಕೂಡ ಜಾರಿ ಮಾಡಿತ್ತು.

``ಸಲ್ಮಾನ್‍ರನ್ನು ಓಲೈಸಲು ನನ್ನ ವಿರುದ್ಧ ಈ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ ನನಗೆ ಕಳೆದ 3 ವರ್ಷಗಳಿಂದ ಮಾನಸಿಕ ಯಾತನೆ, ಕಿರುಕುಳ, ಮರ್ಯಾದೆಗೆ ಭಂಗ ಉಂಟಾಗಿದೆ. ಹೀಗಾಗಿ ಸಲ್ಮಾನ್ ವಿರುದ್ಧ ರು. 250 ಕೋಟಿ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ'' ಎಂದಿದ್ದಾರೆ ಗಲಾನಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com