ಬಾಲಿವುಡ್ ನಟ ಅಜಯ್ ದೇವಗನ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

ಬಾಲಿವುಡ್ ಸಿಂಗಂ ನಟ ಅಜಯ್ ದೇವಗನ್ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದರು.
ಅಜಯ್ ದೇವಗನ್
ಅಜಯ್ ದೇವಗನ್

ಬಾಲಿವುಡ್ ಸಿಂಗಂ ನಟ ಅಜಯ್ ದೇವಗನ್ ಇತ್ತೀಚೆಗೆ ಮಂಗಳೂರಿಗೆ ಭೇಟಿ ನೀಡಿದ್ದರು.

ಮಂಗಳೂರು ವಿಮಾನ ನಿಲ್ದಾಣದಲ್ಲಿ  ತಮ್ಮ ನೆಚ್ಚಿನ ನಟನನ್ನು ನೋಡಿದ ಅಭಿಮಾನಿಗಳು ಫುಲ್ ಖುಷಿಯಾದರು. ಕೆಲವರು ಅಜಯ್ ದೇವಗನ್ ಜೊತೆ ಸೆಲ್ಫೀ ತೆಗೆದು ಕೊಂಡರೇ ಮತ್ತೆ ಕೆಲವರು ಆಟೋಗ್ರಾಫ್ ಹಾಕಿಸಿಕೊಂಡರು.

ಅಜಯ್ ದೇವಗನ್ ಕುಕ್ಕೆ ಶ್ರೀ ಸುಬ್ರಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಹಲವು ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಒಂದು ರಾತ್ರಿ ಪೂರ್ತಿ ಕುಕ್ಕೆ ಸುಬ್ರಮಣ್ಯದ ಹೋಟೆಲ್ ನಲ್ಲಿ  ಅಜಯ್ ದೇವಗನ್ ತಂಗಿದ್ದರು.

ಇನ್ನು ಅಜಯ್ ದೇವಗನ್  ಶಿವಾಯ್ ಚಿತ್ರ ನಿರ್ದೇಶಿಸುತ್ತಿದ್ದೂ, ಅದಕ್ಕಾಗಿ ಕುಕ್ಕೆ ಸುಬ್ರಮಣ್ಯ ದೇವರ ಸನ್ನಿಧಿಯಲ್ಲಿ ಪೂಜೆ ನೆರವೇರಿಸುವಂತೆ ಅಜಯ್ ದೇವಗನ್  ಅವರಿಗೆ ತಮ್ಮ ಸ್ನೇಹಿತರೊಬ್ಬರು ಸಲಹೆ ನೀಡಿದ್ದರು. ಈ ಹಿನ್ನಲೆಯಲ್ಲಿ ಕುಕ್ಕೆ ದೇವಾಲಯದಲ್ಲಿ ಹಲವು  ಪೂಜೆಗಳನ್ನು ನೆರವೇರಿಸಲಾಯ್ತು.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com