ಅದರಲ್ಲಿ ಅಕ್ಷಯ್, ಧನ್ಯವಾದ ಹೇಳುವುದು ಸಣ್ಣ ಶಬ್ದವಾಗುತ್ತದೆ. ನನಗೆ ಸಿಕ್ಕಿದ ಈ ಗೌರವಕ್ಕೆ ನಿಜಕ್ಕೂ ಧನ್ಯನಾಗಿದ್ದೇನೆ. ಸದ್ಯ ನನ್ನ ಭಾವನೆಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನನ್ನ ಅಭಿಮಾನಿಗಳು ಮತ್ತು ತೀರ್ಪುಗಾರರ ತಂಡಕ್ಕೆ ಧನ್ಯವಾದ ಹೇಳಬೇಕು. ರುಸ್ತುಮ್ ನಲ್ಲಿ ನನಗೆ ಸಿಕ್ಕಿದ ಪಾತ್ರ ವಿಶೇಷವಾಗಿತ್ತು. ಭಾರತೀಯ ನೌಕಾಪಡೆಯ ಯೂನಿಫಾರ್ಮ್ ಧರಿಸುವುದೇ ಒಂದು ಗೌರವವಾಗಿತ್ತು. ಇದೀಗ ರಾಷ್ಟ್ರಪ್ರಶಸ್ತಿ ಸಿಗುವ ಮೂಲಕ ಆ ಗೌರವ ಮತ್ತಷ್ಟು ಹೆಚ್ಚಾಗಿದೆ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.