ಸೋನು ನಿಗಮ್ ಅವರ ಟ್ವೀಟ್ ಗೆ ವಿರೋಧ ವ್ಯಕ್ತಪಡಿಸಿದ್ದ ಪಶ್ಚಿಮ ಬಂಗಾಳದ ಮೌಲ್ವಿ ಸಯ್ಯದ್ ಶಾ ಅತೀಫ್ ಅಲಿ ಅಲ್ ಖಾದ್ರಿ ಬಾಲಿವುಡ್ ಗಾಯಕನ ತಲೆ ಬೋಳಿಸಿ, ಅವರ ಕೊರಳಿಗೆ ಹಳೆಯ ಬೂಟುಗಳ ಹಾರ ಹಾಕಿ ಅವರನ್ನು ದೇಶದಾದ್ಯಂತ ಮೆರವಣಿಗೆ ಮಾಡಿದವರಿಗೆ 10 ಲಕ್ಷ ರುಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಈ ಸವಾಲನ್ನು ಸ್ವೀಕರಿಸಿದ್ದ ಸೋನ್ ನಿಗಮ್ ತಲೆ ಬೋಳಿಸಿಕೊಂಡಿದ್ದರು. ಈ ಬೆನ್ನಲ್ಲೇ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ರಣ್ ದೀಪ್ ಹೂಡಾ, ಮೌಲ್ವಿಯ ಫಾತ್ವಾಗೆ ಉತ್ತರಿಸಿರುವ ಸೋನು ನಿಗಮ್ ಸ್ವತಃ ತಾವೇ ಹೋಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ. ಸೋನು ನಿಗಮ್ ಧ್ವನಿ ವರ್ಧಕಗಳ ಬಗ್ಗೆ ಮಾತನಾಡಿದರೇ ಹೊರತು ಧರ್ಮದ ಬಗ್ಗೆ ಅಲ್ಲ ಎಂದು ಹೂಡಾ ಸೋನು ನಿಗಮ್ ಗೆ ಬೆಂಬಲ ಸೂಚಿಸಿದ್ದಾರೆ.