'ಅಜಾನ್' ಅನಾಗರಿಕತೆ, ಸೋನು ನಿಗಮ್ ಬಳಿಕ ಇದೀಗ ಸುಚಿತ್ರ ಟ್ವೀಟ್

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು...
ಸುಚಿತ್ರ ಕೃಷ್ಣಮೂರ್ತಿ
ಸುಚಿತ್ರ ಕೃಷ್ಣಮೂರ್ತಿ
ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಗಾಯಕಿ-ನಟಿ ಸುಚಿತ್ರ ಕೃಷ್ಣಮೂರ್ತಿ ಎಂಬುವರು ಅಜಾನ್ ಕುರಿತು ಟ್ವೀಟ್ ಮಾಡಿದ್ದಾರೆ. 
ಜನರ ಮೇಲೆ ಧರ್ಮವನ್ನು ಹೇಗೆ ಒತ್ತಾಯ ಪೂರ್ವಕವಾಗಿ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 4.45ರ ಸುಮಾರಿಗೆ ಆಕ್ರಮಣಕಾರಿ/ಕಿವಿ ಛಿದ್ರಗೊಳಿಸುವ ಅಜಾನ್ ಕರೆ ಅನಾಗರಿಕವಾಗಿದೆ ಎಂದು ಟ್ವೀಟಿಸಿದ್ದು ಇದಕ್ಕೆ ಪರ ವಿರೋಧ ಟ್ವೀಟ್ ಗಳು ಬರುತ್ತಿದೆ.
ನಿಶಬ್ಧ ಸಮಯದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಆಜಾನ್ ಮೂಲಕ ಬೆಳಗ್ಗೆ 5 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸುವುದು ಅನಾಗರಿಕತೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಜಾನ್ ಕುರಿತಂತೆ ಸೋನು ನಿಗಮ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಕೆಲ ಕಿಡಿಗೇಡಿಗಳು ಸೋನು ನಿಗಮ್ ಅವರಿಗೆ ಕೆಲ ಪ್ರತ್ಯಕ್ಷ ಬೆದರಿಕೆಗಳನ್ನು ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com