'ಅಜಾನ್' ಅನಾಗರಿಕತೆ, ಸೋನು ನಿಗಮ್ ಬಳಿಕ ಇದೀಗ ಸುಚಿತ್ರ ಟ್ವೀಟ್

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು...
ಸುಚಿತ್ರ ಕೃಷ್ಣಮೂರ್ತಿ
ಸುಚಿತ್ರ ಕೃಷ್ಣಮೂರ್ತಿ
Updated on
ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಗಾಯಕಿ-ನಟಿ ಸುಚಿತ್ರ ಕೃಷ್ಣಮೂರ್ತಿ ಎಂಬುವರು ಅಜಾನ್ ಕುರಿತು ಟ್ವೀಟ್ ಮಾಡಿದ್ದಾರೆ. 
ಜನರ ಮೇಲೆ ಧರ್ಮವನ್ನು ಹೇಗೆ ಒತ್ತಾಯ ಪೂರ್ವಕವಾಗಿ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 4.45ರ ಸುಮಾರಿಗೆ ಆಕ್ರಮಣಕಾರಿ/ಕಿವಿ ಛಿದ್ರಗೊಳಿಸುವ ಅಜಾನ್ ಕರೆ ಅನಾಗರಿಕವಾಗಿದೆ ಎಂದು ಟ್ವೀಟಿಸಿದ್ದು ಇದಕ್ಕೆ ಪರ ವಿರೋಧ ಟ್ವೀಟ್ ಗಳು ಬರುತ್ತಿದೆ.
ನಿಶಬ್ಧ ಸಮಯದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಆಜಾನ್ ಮೂಲಕ ಬೆಳಗ್ಗೆ 5 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸುವುದು ಅನಾಗರಿಕತೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಜಾನ್ ಕುರಿತಂತೆ ಸೋನು ನಿಗಮ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಕೆಲ ಕಿಡಿಗೇಡಿಗಳು ಸೋನು ನಿಗಮ್ ಅವರಿಗೆ ಕೆಲ ಪ್ರತ್ಯಕ್ಷ ಬೆದರಿಕೆಗಳನ್ನು ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com