ಮಹೇಶ್ ಭಟ್‌ಗೆ ಬೆದರಿಕೆ ಕರೆ: ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊರ್ವನ ಬಂಧನ

ಬಾಲಿವುಡ್ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಗೆ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ...
ಮಹೇಶ್ ಭಟ್, ಅಲಿಯಾ ಭಟ್
ಮಹೇಶ್ ಭಟ್, ಅಲಿಯಾ ಭಟ್
ಬಾಲಿವುಡ್ ಖ್ಯಾತ ನಿರ್ಮಾಪಕ ಮಹೇಶ್ ಭಟ್ ಗೆ ಬೆದರಿಕೆ ಕರೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ. 
ಬೆದರಿಕೆ ಕರೆ ಮಾಡಿದ್ದ ಆಗಂತುಕ ವ್ಯಕ್ತಿ ಹಣ ವರ್ಗಾಹಿಸಲು ಮಹೇಶ್ ಭಟ್ ಅವರಿಗೆ ಬ್ಯಾಂಕ್ ಖಾತೆ ನಂಬರ್ ಅನ್ನು ಮೇಸೆಜ್ ಮಾಡಿದ್ದ ಇದರ ಆಧಾರದ ಮೇಲೆ ಮುಂಬೈ ಪೊಲೀಸರು ಉತ್ತರ ಪ್ರದೇಶ ಪೊಲೀಸರಿಗೆ ಮಾಹಿತಿ ನೀಡಿದ್ದು ಲಖನೌನಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  
ಫೆಬ್ರವರಿ ಬೆದರಿಕೆ ಕರೆ ಮಾಡಿದ್ದ ವ್ಯಕ್ತಿ ಸಮಯಕ್ಕೆ ಸರಿಯಾಗಿ ಹಣ ನೀಡದಿದ್ದರೆ ಪುತ್ರಿ ಅಲಿಯಾ ಭಟ್, ಪತ್ನಿ ಸೋನಿ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ನಂತರ ಬ್ಯಾಂಕ್ ಖಾತೆ ನಂಬರ್ ಅನ್ನು ಮೇಸೆಜ್ ಮಾಡಿದ್ದು ಈ ಬ್ಯಾಂಕ್ ಖಾತೆ ಲಖನೌನ ಬ್ಯಾಂಕ್ ನ ಖಾತೆಯಾಗಿದ್ದ ಖಾತೆದಾರನನ್ನು ಪೊಲೀಸರು ಬಂಧಿಸಿದ್ದಾರೆ. 
ಈ ಸಂಬಂಧ ಮಹೇಶ್ ಭಟ್ ಜೂಹೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಈ ಪ್ರಕರಣವನ್ನು ಮುಂಬೈ ಆ್ಯಂಟಿ ಎಕ್ಸ್‌ಟ್ರಾಕ್ಷನ್ ಸೆಲ್ ಗೆ ವರ್ಗಾಹಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com