ಫೋನಿ ಪೀಡಿತ ಒಡಿಶಾಗೆ 1 ಕೋಟಿ ನೀಡಿದ ನಟ ಅಕ್ಷಯ್​ ಕುಮಾರ್

ಒಡಿಶಾಕ್ಕೆ ಅಪ್ಪಳಿಸಿದ ಫೋನಿಚಂಡಮಾರುತ ನೂರಾರು ಜನರ ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್
Updated on
ಮುಂಬೈ: ಒಡಿಶಾಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ ನೂರಾರು ಜನರ  ಬದುಕನ್ನು ನಾಶಪಡಿಸಿದೆ. ಫೋನಿ ಪೀಡಿತ ಒಡಿಶಾ ರಾಜ್ಯಕ್ಕೆ ಕೇಂದ್ರ ಸರ್ಕಾರ 1 ಸಾವಿರ ಕೋಟಿ ಬಿಡುಗಡೆ ಮಾಡಿದ್ದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ ಒಂದು ಕೋಟಿ ರೂ, ಪರಿಹಾರವನ್ನು ನೀಡಿದ್ದಾರೆ.
 ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪರಿಹಾರ ನಿಧಿಗೆ ಅಕ್ಷಯ್ ಕುಮಾರ್ ಈ ಹಣವನ್ನು ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ಇನ್ನು ನಟ ಅಕ್ಷಯ್ ಕುಮಾರ್ ಈ ಬಗೆಯಲ್ಲಿ ನೆರವು ನೀಡುತ್ತಿರುವುದು ಇದೇನೂ ಹೊಸದಲ್ಲ. ಹಿಂದೆ ಕೇರಳ, ಚೆನ್ನೈ ಪ್ರವಾಹಗಳಾದಾಗಲೂ ಅವರು ಆರ್ಥಿಕ ನೆರವು ನೀಡಿದ್ದರು.
ಅಲ್ಲದೆ ಭಾರತೀಯ ಸೈನಿಕರ ಕುಟುಂಬಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಗೃಹಸಚಿವಾಲಯ ತೆರೆದಿರುವ ಭಾರತ್​ ಕೆ ವೀರ್​ ವೆಬ್​ಸೈಟ್​ ಮೂಲಕ ನೆರವಾಗುತ್ತಿದ್ದಾರೆ.
ಫೋನಿ ಚಂಡಮಾರುತದಿಂದಾಗಿ ಒಡಿಶಾದಲ್ಲಿ  ಅಂದಾಜು 34 ಜನ ಸಾವನ್ನಪ್ಪಿದ್ದು ನೂರಾರು ಮಂಂದಿ ನಿರಾಶ್ರಿತರಾಗಿದ್ದಾರೆ. ಸಾವಿರಾರು ಕೋಟಿ ರು. ಆಸ್ತಿಪಾಸ್ತಿ ಹಾನಿಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com