ಮುಂಬೈ: ನಟಿ ಕಂಗನಾ ರಣಾವತ್ ವಿರುದ್ಧ ಬಾಲಿವುಡ್ ಸಾಹಿತಿ ಜಾವೇದ್ ಅಖ್ತರ್ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಕ್ರಿಮಿನಲ್ ದೂರು ದಾಖಲಿಸಿದ್ದಾರೆ. ಟಿವಿ ಸಂದರ್ಶನವೊಂದರಲ್ಲಿ ಕಂಗನಾ ರಣಾವತ್, ನನ್ನ ವಿರುದ್ಧ ಅವಹೇಳನಕಾರಿ , ನಿರಾಧಾರ ಹೇಳಿಕೆ ನೀಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅಂಧೇರಿಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನಲ್ಲಿ ದೂರು ದಾಖಲಿಸಿರುವ ಅಖ್ತರ್, ಮಾನನಷ್ಟದ ಕಾರಣ ಕಂಗನಾ ರಣಾವತ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ. ಕಂಗನಾ ರಣಾವತ್ ಇತ್ತೀಚಿಗೆ ನೀಡಿರುವ ನಿರಾಧಾರ ಹೇಳಿಕೆಗಳಿಂದ ತಮ್ಮ ಮಾನ ಹಾನಿಯಾಗಿರುವುದಾಗಿ ಹಿರಿಯ ಸಾಹಿತಿ ದೂರಿನಲ್ಲಿ ದೂರಿದ್ದಾರೆ.
ನಟ ಸುಶಾಂತ್ ಸಿಂಗ್ ರಜಪೂತ್ ಜೂನ್ ನಲ್ಲಿ ನಿಧನದ ನಂತರ ಬಾಲಿವುಡ್ನಲ್ಲಿ ಅಸ್ತಿತ್ವದಲ್ಲಿರುವ ಗುಂಪುಗಾರಿಕೆಯನ್ನು ಉಲ್ಲೇಖಿಸುವಾಗ ರಣಾವತ್ , ತಮ್ಮ ಹೆಸರನ್ನು ಎಳೆದು ತಂದಿದ್ದು, ನಟ ಹೃತಿಕ್ ರೋಷನ್ ಜೊತೆಗಿನ ಅಕ್ರಮ ಸಂಬಂಧದ ಬಗ್ಗೆ ಮಾತನಾಡದಂತೆ ಬೆದರಿಕೆ ಹಾಕಿರುವುದಾಗಿ ಅಖ್ತರ್ ದೂರಿನಲ್ಲಿ ತಿಳಿಸಿದ್ದಾರೆ.
ರಣಾವತ್ ನೀಡಿರುವ ಹೇಳಿಕೆಗಳನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಅಖ್ತರ್ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Advertisement