ನಿಯಮ ಉಲ್ಲಂಘಿಸಿ ಕಟ್ಡಡ ನವೀಕರಣ ಆರೋಪ; ಕಂಗನಾ ರನೌತ್ ಮುಂಬೈ ಬಂಗಲೆ ಕೆಡವುವ ಕುರಿತು ಬಿಎಂಸಿ ನೋಟಿಸ್

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದು, ಅವರ ಮಣಿಕರ್ಣಿಕಾ ಕಚೇರಿ ಕೆಡವುವ ಕುರಿತು ಎಚ್ಚರಿಕೆ ನೀಡಿದೆ.
ಕಂಗನಾ ರನೌತ್ ಬಂಗಲೆ
ಕಂಗನಾ ರನೌತ್ ಬಂಗಲೆ

ಮುಂಬೈ; ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಸುದ್ದಿಗೆ ಗ್ರಾಸವಾಗುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್ ಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ನೀಡಿದ್ದು, ಅವರ ಮಣಿಕರ್ಣಿಕಾ ಕಚೇರಿ ಕೆಡವುವ ಕುರಿತು ಎಚ್ಚರಿಕೆ ನೀಡಿದೆ.

ಹೌದು.. ಶಿವಸೇನೆ ನಾಯಕರ ಬೆದರಿಕೆ ಹೊರತಾಗಿಯೂ ಮುಂಬೈಗೆ ಆಗಮಿಸಿರುವ ನಟಿ ಕಂಗನಾ ರನೌತ್ ಗೆ ಮಹಾರಾಷ್ಟ್ರ ಸರ್ಕಾರ ವೈಪ್ಲಸ್ ಭದ್ರತೆ ನೀಡಿದ ಬೆನ್ನಲ್ಲೇ ಇತ್ತ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಂಗನಾ ರನೌತ್ ಗೆ ನೋಟಿಸ್ ಜಾರಿ ಮಾಡಿದೆ. ಮುಂಬೈನ ಬಾಂದ್ರಾದಲ್ಲಿರುವ ಮಣಿಕರ್ಣಿಕಾ  ಕಚೇರಿಗೆ ನೋಟಿಸ್ ನೀಡಿದ್ದಾರೆ. ಕಂಗನಾ ಅವರು ನಿಯಮ ಬಾಹಿರವಾಗಿ ತಮ್ಮ ನಿವಾಸವನ್ನು ನವೀಕರಿಸಿದ್ದು, ಈ ಸಂಬಂಧ ಕಟ್ಟಡವನ್ನು ಕೆಡವುವ ಕುರಿತು ನೋಟಿಸ್ ನೀಡಿದೆ.

ಈ ಬಗ್ಗೆ ಸ್ವತಃ ಕಂಗನಾ ರನೌತ್ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, 'ತನ್ನ ಮುಂಬೈ ಕಚೇರಿಯ ಮೇಲೆ ಬಿಎಂಸಿ  ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಮುಂಬೈನ ತನ್ನ 'ಮಣಿಕರ್ಣಿಕಾ' ಕಚೇರಿಗೆ ಬಿಎಂಸಿ ಅಧಿಕಾರಿಗಳು ಭೇಟಿ ನೀಡಿದ್ದು, ಮಂಗಳವಾರ ಆಸ್ತಿಯನ್ನು ಕೆಡವಬಹುದೆಂದು ರನೌತ್ ಟ್ವಿಟ್ಟರ್ ಗೆ  ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com