'ಜವಾನ್' ಬಿಡುಗಡೆ ಮುನ್ನ ತಿರುಪತಿ ಬಾಲಾಜಿ ಮೊರೆ ಹೋದ ಬಾಲಿವುಡ್ ನಟ ಶಾರೂಕ್ ಖಾನ್, ವಿಡಿಯೊ ನೋಡಿ

ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಚಿತ್ರ ಜವಾನ್ ತೆರೆಗೆ ಬರಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿನಿಮಾದ ಸಕ್ಸಸ್ ಗಾಗಿ ಅವರು ಇಂದು ಮಂಗಳವಾರ ಆಂಧ್ರ ಪ್ರದೇಶದ ತಿರುಪತಿ ಬಾಲಾಜಿ ದೇವರ ಮೊರೆ ಹೋಗಿದ್ದಾರೆ. 
ಶಾರೂಕ್ ಖಾನ್ ತಿರುಪತಿ ದೇವಸ್ಥಾನದಲ್ಲಿ
ಶಾರೂಕ್ ಖಾನ್ ತಿರುಪತಿ ದೇವಸ್ಥಾನದಲ್ಲಿ

ತಿರುಪತಿ: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಚಿತ್ರ ಜವಾನ್ ತೆರೆಗೆ ಬರಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿನಿಮಾದ ಸಕ್ಸಸ್ ಗಾಗಿ ಅವರು ಇಂದು ಮಂಗಳವಾರ ಆಂಧ್ರ ಪ್ರದೇಶದ ತಿರುಪತಿ ಬಾಲಾಜಿ ದೇವರ ಮೊರೆ ಹೋಗಿದ್ದಾರೆ. 

ಇದೇ ಸೆಪ್ಟೆಂಬರ್ 7ರಂದು ಜವಾನ್ ಸಿನಿಮಾ ಜಗತ್ತಿನಾದ್ಯಂತ ಬಿಡುಗಡೆಯಾಗುತ್ತಿದೆ. ಜವಾನ್ ರಿಲೀಸ್‌ಗೂ ಮುನ್ನ ಪ್ರಮೋಷನ್‌ ಬ್ಯುಸಿಯಲ್ಲಿರುವ ನಟ ಇಂದು ನಸುಕಿನ ಜಾವ ಬಿಡುವು ಮಾಡಿಕೊಂಡು ತಮ್ಮ ಪುತ್ರಿ ಸುಹಾನ ಖಾನ್, ಚಿತ್ರದ ನಾಯಕಿ ಬಹುಭಾಷಾ ತಾರೆ ನಯನತಾರಾ ಮತ್ತು ತಮ್ಮ ಪರ್ಸನಲ್ ಮ್ಯಾನೇಜರ್ ಪೂಜಾ ದದ್ಲಾನಿ ಜೊತೆ ತಿರುಪತಿ ಸನ್ನಿಧಾನಕ್ಕೆ ಬಂದಿದ್ದರು. 

ತಿಮ್ಮಪ್ಪನ ದರ್ಶನ ಪಡೆದು ಬಂದ ಶಾರುಖ್ ಖಾನ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು. ಶಾರೂಕ್ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನದ ಒಳ-ಹೊರಗೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ದೇವಸ್ಥಾನ ಭೇಟಿ ವೇಳೆ ಶಾರೂಕ್ ಖಾನ್ ಬಿಳಿ ಶರ್ಟ್ ಮತ್ತು ಪಂಚೆ ಸಾಂಪ್ರದಾಯಿಕ ದಿರಿಸಿನಲ್ಲಿದ್ದರು. ಮೊದಲಿಗೆ ಧ್ವಜಸ್ತಂಭಕ್ಕೆ ಪೂಜೆ ಸಲ್ಲಿಸಿ ನಂತರ ವೆಂಕಟೇಶ್ವರ ದೇವರಿಗೆ ಪೂಜೆ ಸಲ್ಲಿಸಿದರು.

ತಮಿಳಿನ ನಿರ್ದೇಶಕ ಅಟ್ಲಿ ಜವಾನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸನ್ಯಾ ಮಲ್ಹೋತ್ರಾ ಸಹ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com