

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಇಂದು ನಿಧನರಾಗಿದ್ದಾರೆ. ದಿಗ್ಗಜನ ಸಾವಿಗೆ ಪ್ರದಾನಿ ಮೋದಿ ಸೇರಿದಂತೆ ಸಿನಿ ಗಣ್ಯರು ಹಾಗೂ ಹಲವರು ಸಂತಾಪ ಸೂಚಿಸಿದ್ದಾರೆ. ಇನ್ನು ಕಾಕತಾಳೀಯ ಎಂಬಂತೆ ಕನ್ನಡದ ಹಿರಿಯ ರೆಬೆಲ್ ಸ್ಟಾರ್ ಅಂಬರೀಷ್ ಅವರ ಪುಣ್ಯ ಸ್ಮರಣೆ ದಿನದಂದೇ ನಟ ಧರ್ಮೇಂದ್ರ ವಿಧಿವಶರಾಗಿದ್ದಾರೆ. ಇಂದಿಗೆ ನಟ ಅಂಬರೀಷ್ ನಿಧನರಾಗಿ 7 ವರ್ಷ ತುಂಬುತ್ತಿದೆ. ಅಂಬರೀಷ್ ಹಾಗೂ ಧರ್ಮೇಂದ್ರ ಆಪ್ತ ಸ್ನೇಹಿತರಾಗಿದ್ದರು.
ಧಮೇಂದ್ರ ಅವರ ಸಾವಿಗೆ ಕನ್ನಡದ ನಟಿ ಸುಮಲತಾ ಅವರು ಕಂಬನಿ ಮಿಡಿದಿದ್ದಾರೆ. ಹಿಂದಿಯ ಕ್ಷತ್ರಿಯ ಚಿತ್ರದಲ್ಲಿ ಧಮೇಂದ್ರ ಜೊತೆ ತಾವು ಪರದೆ ಹಂಚಿಕೊಂಡಿದ್ದಾಗಿ ಸುಮಲತಾ ಅವರು ಹೇಳಿದ್ದಾರೆ. ಮತ್ತೊಂದೆಡೆ, ಅಂಬಿಯ 7ನೇ ಪುಣ್ಯ ಸ್ಮರಣೆ ಹಿನ್ನೆಲೆಯಲ್ಲಿ ಸುಮಲತಾ ಅವರು ಟ್ವೀಟ್ ಮಾಡಿದ್ದಾರೆ.
Advertisement