ಖಳ ನಾಯಕನ ಪಾತ್ರದ ಮೂಲಕ ಕಾರ್ತಿಕ್ ಜಯರಾಂ ಕಾಲಿವುಡ್ ಗೆ ಎಂಟ್ರಿ

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.
ಸ್ಯಾಂಡಲ್ ವುಡ್ ನಟ ಕಾರ್ತಿಕ್ ಜಯರಾಂ
ಸ್ಯಾಂಡಲ್ ವುಡ್ ನಟ ಕಾರ್ತಿಕ್ ಜಯರಾಂ
Updated on

ಕನ್ನಡದ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ಜನಪ್ರಿಯತೆ ಪಡೆದಿರುವ ನಟ ಕಾರ್ತಿಕ್ ಜಯರಾಂ, ತಮಿಳು ಚಿತ್ರರಂದಲ್ಲೂ ನಟನೆ ಮಾಡಲಿದ್ದಾರೆ.

ವಿಲನ್ ಪಾತ್ರಗಳ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶಿಸಿದ್ದ ಕಾರ್ತಿಕ್ ಜಯರಾಂ, ಖಳನಾಯಕನ ಪಾತ್ರದ ಮೂಲಕವೇ ತಮಿಳು ಚಿತ್ರರಂಗಕ್ಕೂ ಎಂಟ್ರಿ ನೀಡುತ್ತಿದ್ದಾರೆ. ಕಾಲಿವುಡ್ ನಟ ಕಾರ್ತಿಯೊಂದಿಗೆ ಶಕುನಿ ಚಿತ್ರ ಮಾಡಿದ್ದ ಶಂಕರ್ ದಯಾಳ್ ಕಾರ್ತಿಕ್ ಜಯರಾಂ ನಟಿಸುತ್ತಿರುವ ಚಿತ್ರವನ್ನೂ ನಿರ್ದೇಶಿಸುತ್ತಿದ್ದು ವಿಷ್ಣು ವಿಶಾಲ್ ನಾಯಕರಾಗಿ ನಟಿಸುತ್ತಿದ್ದಾರೆ.

ಚಿತ್ರೀಕರಣಕ್ಕಾಗಿ ಚೆನ್ನೈ ನಲ್ಲಿರುವ ಕಾರ್ತಿಕ್, ಸಿಟಿ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು "ನಿರ್ದೇಶಕ ಶಂಕರ್ ದಯಾಳ್, ತಮ್ಮ ಮುಂದಿನ ಚಿತ್ರದ ಖಳ ನಾಯಕನ ಪಾತ್ರಕ್ಕಾಗಿ ಅನುಭವಿ ನಟನನ್ನು ಹುಡುಕುತ್ತಿದ್ದರಂತೆ, ಆದರೆ ಪಾತ್ರಕ್ಕೆ ಸರಿಹೊಂದುವ ವ್ಯಕ್ತಿ ಸಿಕ್ಕಿರಲಿಲ್ಲ. ತಮಗೆ ಸಿಸಿಎಲ್ ಮೂಲಕ ಪರಿಚಯವಿದ್ದ ಚಿತ್ರದ ನಾಯಕ ವಿಷ್ಣು ವಿಶಾಲ್, ನನ್ನ ಬಗ್ಗೆ ನಿರ್ದೇಶಕರಿಗೆ ತಿಳಿಸಿದ್ದರು. ಖಳನಾಯಕನ ಪಾತ್ರವಾಗಿದ್ದರಿಂದ, ನನ್ನನ್ನು ಸಂಪರ್ಕಿಸಲು ವಿಷ್ಣು ವಿಶಾಲ್ ಹಿಂದೇಟು ಹಾಕಿದ್ದರು. ಖಳನಾಯಕನ ಪಾತ್ರ ನನಗೆ ಹೇಳಿಮಾಡಿಸಿದಂತಿದ್ದ ಕಾರಣ ನಟನೆಗೆ ಒಪ್ಪಿದೆ ಎಂದು ಹೇಳಿದ್ದಾರೆ.    
ತಮಿಳಿನ ಚಿತ್ರದಲ್ಲಿ ಕಾರ್ತಿಕ್ ಜಯರಾಂ ಯುವ ರಾಜಕಾರಣಿಯ ಪಾತ್ರ ನಿರ್ವಹಿಸುತ್ತಿದ್ದು ಚಿತ್ರಕಥೆಯನ್ನು ಖಳನಾಯಕನ ಪಾತ್ರದ ಸುತ್ತಲೇ ಹೆಣೆಯಲಾಗಿದೆಯಂತೆ. ಸ್ಯಾಂಡಲ್ ವುಡ್ ನಲ್ಲಿ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ಕಾರ್ತಿಕ್, ಚಿತ್ರ ಬಿಡುಗಡೆ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಕನ್ನಡ ಚಿತ್ರಗಳ ನಡುವೆ ಅಥವಾ ಅನ್ಯ ಭಾಷ್ಯಾ ಚಿತ್ರಗಳ ನಡುವೆ ಘರ್ಷಣೆ ಉಂಟಾಗಬಾರದು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com