ಬೆಂಗಳೂರು: ಜಗ್ಗೇಶ್, ದತ್ತಣ್ಣ ಮತ್ತು ಹರಿಪ್ರಿಯ ಜೊತೆಗೆ ವಿಜಯ್ ಪ್ರಸಾದ್ ಅವರ 'ನೀರ್ ದೋಸೆ' ಸಿನೆಮಾದಲ್ಲಿ ನಟಿ ಸುಮನ್ ರಂಗನಾಥನ್ ಶಾಸ್ತ್ರೀಯ ನೃತ್ಯಗಾರ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಸಿನೆಮಾದಲ್ಲಿ ಸುಮನ್ ಅವರ ಮೊದಲ ನೋಟ ಹಂಚಿಕೊಂಡ ವಿಜಯ್ ಪ್ರಸಾದ್ "ಮೂಲ ನಕ್ಷತ್ರದಲ್ಲಿ ಹುಟ್ಟಿರುವ ಮಧ್ಯಮ ವರ್ಗದ ಮಹಿಳೆ ಶ್ರದ್ಧಾಮಣಿಯ ಪಾತ್ರವನ್ನು ಸುಮನ್ ನಿರ್ವಹಿಸಿದ್ದಾರೆ. ಈ ನಕ್ಷತ್ರದಲ್ಲಿ ಹುಟ್ಟಿದವರ ನಡುವೆ ಇರುವ ನಂಬಿಕೆಯೆಂದರೆ ಇವರು ತಂದೆಯಿಲ್ಲದ ವರನನ್ನು ವರಿಸಿಕೊಳ್ಳಬೇಕೆಂಬುದು. ನಂತರ ಅವರು ಜಗ್ಗೇಶ್ ಅವರನ್ನು ಭೇಟಿಯಾಗುತ್ತಾರೆ, ಹೀಗೆ ಕಥೆ ಮುಂದುವರೆಯುತ್ತದೆ" ಎನ್ನುತ್ತಾರೆ.
ನಟಿ ಸುಮನ್ ಬಗ್ಗೆ ಪ್ರಶಂಸೆ ಸುರಿಸುವ ನಿರ್ದೇಶಕ "ಮತ್ತೆ ಮತ್ತೆ ಸುಮನ್ ತಾವು ಅತ್ಯುತ್ತಮ ನಟಿ ಎಂಬುದನ್ನು ಸಾಬೀತುಪಡಿಸುತ್ತಾ ಬಂದಿದ್ದಾರೆ ಆದುದರಿಂದ ನಿರ್ದೇಶಕರಿಗೆ ಅವರ ಮೇಲೆ ಹೆಚ್ಚಿನ ಗೌರವ. ಅವರದ್ದು ಒಳ್ಳೆಯ ನಟನಾ ಕೌಶಲ್ಯ. ಅದನ್ನು ಸಿದ್ಲಿಂಗು ಮತ್ತು ನೀರ್ ದೋಸೆಯಲ್ಲಿ ನೋಡಿದ್ದೇನೆ" ಎನ್ನುತ್ತಾರೆ ವಿಜಯ್ ಪ್ರಸಾದ್.
Advertisement