ಇಕ್ಕಟ್ಟಿನಲ್ಲಿ `ನಾನು ಅವನಲ್ಲ...ಅವಳು

ಚಲನಚಿತ್ರೋತ್ಸದಲ್ಲಿ ಪ್ರದರ್ಶನಕ್ಕೆ ಕನ್ನಡದಿಂದ ಆಯ್ಕೆಯಾಗಿದ್ದ `ನಾನು ಅವನಲ್ಲ..ಅವಳು' ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿದೆ. ನಾಡಿನ ಹಿತದೃಷ್ಟಿಯಿಂದ ಚಿತ್ರೋದ್ಯಮ ಗೋವಾ ಚಲನಚಿತ್ರೋತ್ಸವ ಬಹಿಷ್ಕರಿಸಲಿರುವುದರಿಂದ ಅಲ್ಲಿಗೆ ಹೋಗಬೇಕೆ ಅಥವಾ ಬೇಡವೇ ಎನ್ನುವ ಗೊಂದಲ ಈ ಚಿತ್ರ ತಂಡದ್ದು...
(ಸಂಗ್ರಹ ಚಿತ್ರ)
(ಸಂಗ್ರಹ ಚಿತ್ರ)

ಬೆಂಗಳೂರು: ಚಲನಚಿತ್ರೋತ್ಸದಲ್ಲಿ ಪ್ರದರ್ಶನಕ್ಕೆ ಕನ್ನಡದಿಂದ ಆಯ್ಕೆಯಾಗಿದ್ದ `ನಾನು ಅವನಲ್ಲ..ಅವಳು' ಚಿತ್ರತಂಡ ಇಕ್ಕಟ್ಟಿಗೆ ಸಿಲುಕಿದೆ. ನಾಡಿನ ಹಿತದೃಷ್ಟಿಯಿಂದ ಚಿತ್ರೋದ್ಯಮ ಗೋವಾ ಚಲನಚಿತ್ರೋತ್ಸವ ಬಹಿಷ್ಕರಿಸಲಿರುವುದರಿಂದ ಅಲ್ಲಿಗೆ ಹೋಗಬೇಕೆ ಅಥವಾ ಬೇಡವೇ ಎನ್ನುವ ಗೊಂದಲ ಈ ಚಿತ್ರ ತಂಡದ್ದು.

ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು ಮಾತನಾಡಿ, ಚಲನಚಿತ್ರೋತ್ಸವಕ್ಕೆ ಕನ್ನಡದಿಂದ `ನಾನು ಅವನಲ್ಲ..ಅವಳು' ಚಿತ್ರ ಆಯ್ಕೆಯಾಗಿದೆ. ಕನ್ನಡಿಗರ ಹಿತದೃಷ್ಟಿಯಿಂದ ನಾವು ಚಿತ್ರೋತ್ಸವನ್ನು ಬಹಿಷ್ಕರಿಸುತ್ತಿದ್ದೇವೆ.

ಈ ನಿಟ್ಟಿನಲ್ಲಿ ಚಿತ್ರ ತಂಡವೂ ಬೆಂಬಲಿಸಬೇಕು ಎಂದರು. ಭಾಗವಹಿದ್ದಿದ್ದರೆ ಕಾನೂನಾತ್ಮಕವಾಗಿ ಸಮಸ್ಯೆ ಆಗಲಿದೆ. ನಾವು ಕನ್ನಡದ ಪ್ರತಿನಿಧಿಗಳಾಗಿಯೇ ಅಲ್ಲಿಗೆ ಹೋಗುತ್ತಿದ್ದೇವೆ. ಕಪ್ಪುಪಟ್ಟಿ ಕಟ್ಟಿಕೊಂಡು ಭಾಗವಹಿಸುತ್ತೇವೆ ಎಂದು ನಿರ್ದೇಶಕ ಲಿಂಗದೇವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com