ಬಾಲಿವುಡ್ ನಲ್ಲಿ ಸ್ಯಾಂಡಲ್ ವುಡ್ ಛಾಯಾಗ್ರಹಕ ಹೆಚ್ ಸಿ ವೇಣು ಕೈಚಳಕ!

ಸ್ಯಾಂಡಲ್ ವುಡ್ ನ ಖ್ಯಾತ ಛಾಯಾಗ್ರಹಕ ಹೆಚ್ ಸಿ ವೇಣು ಶೀಘ್ರವೇ ಬಾಲಿವುಡ್ ನಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ.
ಛಾಯಾಗ್ರಹಕ ಹೆಚ್ ಸಿ ವೇಣು
ಛಾಯಾಗ್ರಹಕ ಹೆಚ್ ಸಿ ವೇಣು
Updated on
ಸ್ಯಾಂಡಲ್ ವುಡ್ ನ ಖ್ಯಾತ ಛಾಯಾಗ್ರಹಕ ಹೆಚ್ ಸಿ ವೇಣು ಶೀಘ್ರವೇ ಬಾಲಿವುಡ್ ನಲ್ಲೂ ತಮ್ಮ ಕೈಚಳಕ ತೋರಲಿದ್ದಾರೆ. 

ಸ್ಪರ್ಷ, ಆ ದಿನಗಳು, ಜಗ್ಗುದಾದ, ಮಮ್ಮಿ ಸೇವ್ ಮಿ ಚಿತ್ರಗಳು ಸೇರಿದಂತೆ 40ಕ್ಕೂ ಹೆಚ್ಚು ಚಿತ್ರಗಳಲ್ಲಿ ಛಾಯಾಗ್ರಹಣ ಮಾಡಿರುವ ಹೆಚ್ ಸಿ ವೇಣು,  ಪ್ರಭುದೇವ ನಿರ್ದೇಶನದ ಅಭಿಷೇಕ್ ಬಚ್ಚನ್ ಅವರ ಚಿತ್ರಕ್ಕೆ ಛಾಯಾಗ್ರಹಣ ಮಾಡಲಿದ್ದಾರೆ. ಚಿತ್ರಕ್ಕೆ ಲೆಫ್ಟಿ (ಎಡಗೈ ಬಳಕೆ ಮಾಡುವವರು) ಎಂಬ ಶೀರ್ಷಿಕೆ ನೀಡಲಾಗುತ್ತದೆ ಎಂಬ ವದಂತಿಗಳಿದ್ದು, ಈ ಯೋಜನೆಯ ಬಗ್ಗೆ ಹೆಚ್ಚಿನ ವಿವರಗಳು ಇನ್ನಷ್ಟೇ ಸಿಗಬೇಕಿದೆ. 

ಲೆಫ್ಟಿ ಚಿತ್ರದ ನಾಯಕನಾಗಲಿರುವ ಅಭಿಷೇಕ್ ಬಚ್ಚನ್ ನಿಜ ಜೀವನದಲ್ಲೂ ಬರವಣಿಗೆಗೆ ಎಡಗೈ ಬಳಸುತ್ತಾರೆ ಎಂಬುದು ವಿಶೇಷವಾಗಿದ್ದು 2017 ರ ಮಾರ್ಚ್ ನಿಂದ ಸಿನಿಮಾ ಚಿತ್ರೀಕರಣ ನಡೆಯಲಿದೆ. ಬಾಲಿವುಡ್ ಗೆ ಪ್ರವೇಶಿಸುತ್ತಿರುವುದರ ಬಗ್ಗೆ ಸಿಟಿ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿರುವ ವೇಣು, ಪ್ರಭುದೇವಾ ಹಾಗೂ ಅಭಿಷೇಕ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುವುದು ಕನಸಿನ ಯೋಜನೆಯಾಗಿತ್ತು ಈಗ ಆ ಅವಕಾಶ ಬಂದಿದೆ, ವಾಸ್ತವದಲ್ಲಿ ಬಾಲಿವುಡ್ ಗೆ ಪ್ರವೇಶಿಸುವುದು ನನ್ನ ಕನಸಾಗಿರಲಿಲ್ಲ. 15 ವರ್ಷಗಳಿಂದ ಸ್ನೇಹಿತರಾಗಿರುವ ಪ್ರಭುದೇವಾ ಕಾರಣದಿಂದಾಗಿ ಬಾಲಿವುಡ್ ಗೆ ಹೋಗುತ್ತಿದ್ದೇನೆ ಎಂದಿದ್ದಾರೆ. 

ಹೆಚ್ ಸಿ ವೇಣು ಪ್ರಸ್ತುತ ಅರ್ಜುನ್ ಸರ್ಜಾ ನಿರ್ದೇಶನದ, ಪ್ರೇಮ ಬರಹ ಚಿತ್ರಕ್ಕಾಗಿ ಛಾಯಾಗ್ರಹಣ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com