೭೫ ಅಡಿಯ 'ಶಿವಲಿಂಗ' ಕಟೌಟ್ ಗೆ ರುದ್ರಾಕ್ಷಿ ಮಾಲೆ

ಶುಕ್ರವಾರ ಬಿಡುಗಡೆಯಾಗಲಿರುವ ಶಿವರಾಜ್ ಕುಮಾರ್ ನಟನೆಯ 'ಶಿವಲಿಂಗ' ಸಿನೆಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ದಿನದಿಂದ ದಿನಕ್ಕೆ ಏರುತ್ತಿದೆ.
ಶಿವಲಿಂಗ ಸಿನೆಮಾದಲ್ಲಿ ಶಿವರಾಜಕುಮಾರ್
ಶಿವಲಿಂಗ ಸಿನೆಮಾದಲ್ಲಿ ಶಿವರಾಜಕುಮಾರ್

ಬೆಂಗಳೂರು: ಶುಕ್ರವಾರ ಬಿಡುಗಡೆಯಾಗಲಿರುವ ಶಿವರಾಜ್ ಕುಮಾರ್ ನಟನೆಯ 'ಶಿವಲಿಂಗ' ಸಿನೆಮಾದ ಬಗ್ಗೆ ಅಭಿಮಾನಿಗಳ ಕುತೂಹಲ ಮತ್ತು ನಿರೀಕ್ಷೆ ದಿನದಿಂದ ದಿನಕ್ಕೆ ಏರುತ್ತಿದೆ.

ಸಿನೆಮಾ ಪೋಸ್ಟರ್ ಗಳ ಕಟೌಟ್ ಗೆ ಹಾಲಿನ ಅಭಿಷೇಕ ಸಾಮಾನ್ಯವಾಗಿದ್ದು, ಈಗ 'ಶಿವಲಿಂಗ' ಸಿನೆಮಾದ ೭೫ ಅಡಿಯ ಕಟೌಟ್ ಗ ಅಭಿಮಾನಿಗಳು ವಿನೂತನವಾಗಿ ರುದ್ರಾಕ್ಷಿ ಮಾಲೆಯನ್ನು ಹಾಕುವ ಮೂಲಕ ಸಂಭ್ರಮಿಸಿದ್ದಾರೆ.

ಸಿನೆಮಾ ಬಿಡುಗಡೆಯಾಗಲಿರುವ ಸಂತೋಷ್ ಚಿತ್ರಮಂದಿರದಲ್ಲಿ ಈ ಕಟೌಟ್ ಹಾಕಲಿದ್ದು ಇದಕ್ಕಾಗಿ ಕರ್ನಾಟಕ ಶಿವರಾಜಕುಮಾರ್ ಅಭಿಮಾನಿಗಳ ಸಂಘ 1.೨೫ ಲಕ್ಷ ರೂ ವ್ಯಯಿಸುತ್ತಿದೆಯಂತೆ. ಇದರ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಹೊನ್ನಯ್ಯ ಗೌಡ "ರುದ್ರಾಕ್ಷಿ ಶಿವನಿಗೆ ವಿಷೇಶ ಹಾಗೆಯೇ ನಮ್ಮ ನಾಯಕನ ಸಿನೆಮಾದ ಶೀರ್ಷಿಕೆ 'ಶಿವಲಿಂಗ' ಆಗಿರುವುದರಿಂದ ಕಟೌಟ್ ಗೆ ರುದ್ರಾಕ್ಷಿ ಮಾಲೆ ಹಾಕುವುದು ಸೂಕ್ತ ಎಂದೆನಿಸಿತು" ಎಂದಿದ್ದಾರೆ.

ಸಂತೋಷ್ ಚಿತ್ರಮಂದಿರದಲ್ಲದೆ ಕರ್ನಾಟಕದ ಇತರ ಪ್ರಮುಖ ಚಿತ್ರಮಂದಿರಗಳಲ್ಲೂ ಕಟೌಟ್ ಗಳನ್ನು ಹಾಕಿ ಸಂಭ್ರಮಿಸಲು ಅಭಿಮಾನಿಗಳ ಸಂಘ ಸಿದ್ಧತೆ ನಡೆಸಿದೆ.

ಪಿ ವಾಸು ನಿರ್ದೇಶನದ ಈ ಚಿತ್ರದಲ್ಲಿ ಶಿವರಾಜಕುಮಾರ್ ಸಿ ಐ ಡಿ ಪಾತ್ರದಲ್ಲಿ ಕಾಣಿಸಿಕೊಂಡರೆ, ವೇದಿಕಾ ನಾಯಕ ನಟಿ. ಊರ್ವಶಿ, ವೈಶಾಲಿ ದೀಪಕ್, ಸಾಧು ಕೋಕಿಲಾ ಕೂಡ ಸಿನೆಮಾದಲ್ಲಿ ನಟಿಸಿದ್ದು ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com