ಸಿನಿಮಾ ಸುದ್ದಿ
ತೆಲುಗಿನ ಮಗಧೀರ ಚಿತ್ರ ಹಿಂದಿಗೆ ರಿಮೇಕ್?
2009 ರಲ್ಲಿ ತೆರೆಕಂಡು ಅದ್ಧೂರಿ ಪ್ರದರ್ಶನ ತೋರಿದ ತೆಲುಗಿನ ಮಗಧೀರ ಚಿತ್ರವನ್ನ ಹಿಂದಿಗೆ ರಿಮೇಕ್ ಮಾಡಲು ನಟ ಹಾಗೂ ನಿರ್ದೇಶಕ ಪ್ರಭುದೇವ ಸಿದ್ಧತೆ ನಡೆಸುತ್ತಿದ್ದಾರೆ...
ಚೆನ್ನೈ: 2009 ರಲ್ಲಿ ತೆರೆಕಂಡು ಅದ್ಧೂರಿ ಪ್ರದರ್ಶನ ತೋರಿದ ತೆಲುಗಿನ ಮಗಧೀರ ಚಿತ್ರವನ್ನ ಹಿಂದಿಗೆ ರಿಮೇಕ್ ಮಾಡಲು ನಟ ಹಾಗೂ ನಿರ್ದೇಶಕ ಪ್ರಭುದೇವ ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.
ಮಗಧೀರ ರಿಲೀಸ್ ನಂತರ ತೆಲುಗಿನಲ್ಲಿ ರಾಮ್ ಚರಣ್ ತೇಜಾ ಮಾಡಿದ್ದ ಪಾತ್ರವನ್ನು ಬಾಲಿವುಡ್ ನಲ್ಲಿ ಶಾಹಿದ್ ಕಪೂರ್ ಮಾಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದವು,
ಕಾರ್ತಿ ಹಾಗೂ ವಿಶಾಲ್ ಅಭಿನಯದ ಕರುಪ್ಪು ರಾಜಾ ಚಿತ್ರಕ್ಕೆ ಸದ್ಯ ಪ್ರಭುದೇವ್ ಸಂಭಾಷಣೆ ಬರೆಯುತ್ತಿದ್ದಾರೆ, ಇದೊಂದು ಮಲ್ಟಿ ಸ್ಟಾರರ್ ಸಿನಿಮ
ವಾಗಿದೆ.
ಈ ಚಿತ್ರದ ಕೆಲಸ ಮುಗಿದ ಕೂಡಲೇ ಮಗಧೀರ ರಿಮೇಕ್ ಗಾಗಿ ಪ್ರಭುದೇವ ಕೆಲಸ ಆರಂಭಿಸಲಿದ್ದಾರೆ. ಪ್ರಭುದೇವ ಹಿಂದಿಗೆ ರಿಮೇಕ್ ಮಾಡುತ್ತಿರುವುದು ಇದೇ ಮೊದಲಲ್ಲಿ. ಈ ಹಿಂದೆ ವಿಕ್ರಮಾರ್ಕಡು, ಪೊಕಿರಿ ಸೇರಿದಂತೆ ಹಲವು ಚಿತ್ರಗಳನ್ನು ಹಿಂದಿಗೆ ರಿಮೇಕ್ ಮಾಡಿದ್ದಾರೆ.