ಕಿರುತೆರೆ ನಟ ಹರೀಶ್ ಅಕಾಲಿಕ ನಿಧನ

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರವಾಹಿಯ ಖ್ಯಾತ ನಟ ಹರೀಶ್ ಅವರು ಮಂಗಳವಾರ ಅಕಾಲಿಕ ಮೃತ್ಯುವಿಗೆ ತುತ್ತಾಗಿದ್ದಾರೆ...
ಅರಗಿಣಿ ಧಾರವಾಹಿಯ ಖ್ಯಾತ ನಟ ಹರೀಶ್
ಅರಗಿಣಿ ಧಾರವಾಹಿಯ ಖ್ಯಾತ ನಟ ಹರೀಶ್

ಬೆಂಗಳೂರು: ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರವಾಹಿಯ ಖ್ಯಾತ ನಟ ಹರೀಶ್ ಅವರು ಮಂಗಳವಾರ ಅಕಾಲಿಕ ಮೃತ್ಯುವಿಗೆ ತುತ್ತಾಗಿದ್ದಾರೆ.

ಹಲವು ದಿನಗಳಿಂದಲೂ ಡೆಂಗ್ಯೂ ಮತ್ತು ಕಾಮಾಲೆ ರೋಗದಿಂದ ಬಳಲುತ್ತಿದ್ದ ನಟ ಹರೀಶ್ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅರಗಿಣಿ ಧಾರಾವಾಹಿ ಮೂಲಕ ಖ್ಯಾತಿಗಳಿಸಿದ್ದ ಹರೀಶ್ ಅವರು, ಕಲರ್ಸ್ ಕನ್ನಡ ವಾಹನಿಯಲ್ಲಿ ಪ್ರಸಾರವಾಗುತ್ತಿರುವ ಓಂ ಶಕ್ತಿ ಓಂ ಶಾಂತಿ ಧಾರಾವಾಹಿಯಲ್ಲೂ ಪ್ರಮಖ ಪಾತ್ರ ನಿರ್ವಹಿಸುತ್ತಿದ್ದರು.

ಹರೀಶ್ ಅವರ ಅಕಾಲಿಕ ಮೃತ್ಯುವಿಗೆ ಕಿರುತೆರೆ ಕಂಬನಿ ಮಿಡಿದಿದ್ದು, ಕುಟುಂಬಸ್ಥರು ಮೃತ ದೇಹವನ್ನು ಹುಟ್ಟೂರಾದ ಚಿತ್ರದುರ್ಗಕ್ಕೆ ಕೊಂಡೊಯ್ದಿದ್ದಾರೆ. ಆರ್ ಆರ್ ನಗರದಲ್ಲಿ ಹರೀಶ್ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com