ದರ್ಶನ್ ಸೋದರಸಂಬಂಧಿ ಮನೋಜ್ ಪಾದಾರ್ಪಣೆ ಚಿತ್ರಕ್ಕೆ ರಘು ಶಾಸ್ತ್ರಿ ಆಕ್ಷನ್ ಕಟ್

ತೂಗುದೀಪ್ ಕುಟುಂಬದ ಮತ್ತೊಂದು ಕುಡಿ ಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದರ್ಶನ್ ಸೋದರ ಸಂಬಂಧಿ ಮನೋಜ್ ಪಾದಾರ್ಪಣೆ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ...
ರಘು ಶಾಸ್ತ್ರಿ
ರಘು ಶಾಸ್ತ್ರಿ
Updated on
ತೂಗುದೀಪ್ ಕುಟುಂಬದ ಮತ್ತೊಂದು ಕುಡಿ ಚಿತ್ರಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದರ್ಶನ್ ಸೋದರ ಸಂಬಂಧಿ ಮನೋಜ್ ಪಾದಾರ್ಪಣೆ ಚಿತ್ರವನ್ನು ರಘು ಶಾಸ್ತ್ರಿ ನಿರ್ದೇಶಿಸುತ್ತಿದ್ದಾರೆ. 
ರಘು ಶಾಸ್ತ್ರಿ ಈ ಹಿಂದೆ ವಿನಯ್ ರಾಜಕುಮಾರ್ ಅಭಿನಯದ ರನ್ ಆ್ಯಂಟನಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರಕ್ಕೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು. ನಂತರ ವೆಬ್ ಸೀರಿಸ್ ನಲ್ಲಿ ಲೂಸ್ ಕನೆಕ್ಷನ್ ಚಿತ್ರವನ್ನು ನಿರ್ದೇಶಿಸಿದ್ದರು. 
ಸದ್ಯ ದಿನಗರ್ ತೂಗುದೀಪ ನಿರ್ದೇಶನದ ಲೈಫ್ ಜೊತೆ ಒಂದು ಸೆಲ್ಫಿ ಚಿತ್ರಕ್ಕೆ ರಘು ಶಾಸ್ತ್ರಿ ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮನೋಜ್ ಪಾದಾರ್ಪಣೆ ಚಿತ್ರಕ್ಕಾಗಿ ಉತ್ತಮ ನಿರ್ದೇಶಕನ ನಿರೀಕ್ಷೆಯಲ್ಲಿದ್ದ ತೂಗುದೀಪ ಕುಟುಂಬಕ್ಕೆ ರಘು ಶಾಸ್ತ್ರಿ ಮೇಲೆ ಭರವಸೆ ಮೂಡಿದ್ದು ಮನೋಜ್ ಎಂಟ್ರಿಗೆ ಸಿದ್ಧತೆ ನಡೆದಿದೆ. 
ಚಿತ್ರದ ಒನ್ ಲೈನ್ ಸ್ಟೋರಿ ರೆಡಿಯಾಗಿದ್ದು ಇನ್ನು ಚಿತ್ರಕಥೆ ಬರೆಯಬೇಕಿದೆ. 2018ರ ಫೆಬ್ರವರಿಯಲ್ಲಿ ಚಿತ್ರದ ಮುಹೂರ್ತ ನಡೆಯಲಿದ್ದು ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಸಂಪೂರ್ಣ ಮಾಹಿತಿ ಹೊರಬೀಳಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com