ಅತ್ಯಾಚಾರ ಆರೋಪ ಹೊರಿಸಿದ್ದ ನಟಿ ಬಿಂದಿಯಾ; ನಿಜವಾಗಿ ನಡೆದದ್ದನ್ನು ಮೆಲುಕು ಹಾಕಿದ ಕ್ರೇಜಿ ಸ್ಟಾರ್!

ಸ್ಯಾಂಡಲ್ವುಡ್ ಚಿತ್ರರಂಗದ ಕನಸುಗಾರ. ಕ್ರೇಜಿಸ್ಟಾರ್ ರವಿಚಂದ್ರನ್ ಓರ್ವ ಅಪ್ಪಟ ಕಲಾ ಪ್ರೇಮಿ. ಅಂತಹ ರವಿಚಂದ್ರನ್ ಅವರ ಮೇಲೆ ನಟಿಯೊಬ್ಬರು ಅತ್ಯಾಚಾರ ಆರೋಪ...
ರವಿಚಂದ್ರನ್-ಬಿಂದಿಯಾ
ರವಿಚಂದ್ರನ್-ಬಿಂದಿಯಾ
ಸ್ಯಾಂಡಲ್ವುಡ್ ಚಿತ್ರರಂಗದ ಕನಸುಗಾರ. ಕ್ರೇಜಿಸ್ಟಾರ್ ರವಿಚಂದ್ರನ್ ಓರ್ವ ಅಪ್ಪಟ ಕಲಾ ಪ್ರೇಮಿ. ಅಂತಹ ರವಿಚಂದ್ರನ್ ಅವರ ಮೇಲೆ ನಟಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದು ತಮ್ಮ ವೃತ್ತಿ ಜೀವನದ ಕಹಿ ನೆನಪು ಎಂದು ಹೇಳಿಕೊಂಡಿದ್ದಾರೆ. 
ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಈ ಬಗ್ಗೆ ರವಿಚಂದ್ರನ್ ತಮ್ಮ ಹಿಂದಿನ ಕಹಿ ನೆನಪೊಂದನ್ನು ಮಾಡಿಕೊಂಡಿದ್ದಾರೆ. ಕನ್ನಡದಲ್ಲಿ ಮೂಡಿಬಂದಿದ್ದ ಹಳ್ಳಿಮೇಷ್ಟು ಚಿತ್ರ ಮೆಗಾ ಹಿಟ್ ಆಗಿತ್ತು. ಆ ಚಿತ್ರದಲ್ಲಿ ನಟಿಸಿದ್ದ ನಟಿ ಬಿಂದಿಯಾ ಚಿತ್ರೀಕರಣ ಸಂದರ್ಭ ಸಿಬ್ಬಂದಿ ಜತೆ ಜಗಳ ಮಾಡಿಕೊಂಡಿದ್ದರು. ಅದು ಸಾಲದು ಎಂಬಂತೆ ಮುಂಬೈಗೆ ತೆರಳಿ ರವಿಚಂದ್ರನ್ ಮೇಲೆ ಅತ್ಯಾಚಾರದ ಆರೋಪ ಮಾಡಿದ್ದರು. 
ನಟಿ ಬಿಂದಿಯಾ ಮೈಸೂರು ಹೋಟೆಲ್ ವೊಂದರಲ್ಲಿ ರಾತ್ರಿ 12 ಗಂಟೆ ವೇಳೆ ತಮ್ಮ ಮೇಲೆ ರವಿಚಂದ್ರನ್ ಅತ್ಯಾಚಾರಕ್ಕೆ ಯತ್ನಿಸಿದ್ದರು ಎಂದು ಮುಂಬೈ ಮ್ಯಾಗಜಿನ್ ಒಂದಕ್ಕೆ ಸಂದರ್ಶನದಲ್ಲಿ ಹೇಳಿದ್ದರು. ಇದರಿಂದ ಮನನೊಂದ ರವಿಚಂದ್ರನ್ ಅವರು ಅತ್ಯಾಚಾರ ಸಾಬೀತು ಪಡಿಸುವಂತೆ ನಟಿ ಸೇರಿ ಐವರ ವಿರುದ್ಧ ಮಾನಹಾನಿ ದೂರು ದಾಖಸಿಸಿದ್ದರಂತೆ. 
ಈ ಪ್ರಕರಣ ಸಂಬಂಧ ಬೆಂಗಳೂರಿಗೆ ಬಂದಿದ್ದ ನಟಿ ನಾನು ಈ ರೀತಿಯ ಹೇಳಿಕೆ ನೀಡಿಯೇ ಇಲ್ಲ ಎಂದು ಕ್ಷಮೆಯಾಚಿಸಿದ್ದರಂತೆ. ಆದರೆ ಅಷ್ಟಕ್ಕೆ ರವಿಚಂದ್ರನ್ ಅವರು ಸುಮ್ಮನಾಗಲಿಲ್ಲ. ವಿನಾಕಾರಣ ಆರೋಪ ಮಾಡಿದ್ದಕ್ಕಾಗಿ ಆಕೆಯನ್ನು ಒಂದು ದಿನವಾದರೂ ಜೈಲಿನಲ್ಲಿಸಿರಬೇಕು ಎಂದು ಆಕೆಯನ್ನು ಜೈಲಿಗಟ್ಟಿದ್ದೆ ಎಂದು ರವಿಚಂದ್ರನ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com