ಬಿರುಗಾಳಿಯ ಅವಕೃಪೆಗೆ ತುತ್ತಾಗಿ ತೂರಿಹೋದ 'ದ ವಿಲನ್' ಸೆಟ್!

ಸುಂಟರಗಾಳಿ ಮತ್ತು ಬಿರುಗಾಳಿಯ ಅವಕೃಪೆಗೆ ಪ್ರೇಮ್ ನಿರ್ದೇಶನದ 'ದ ವಿಲನ್' ಚಿತ್ರತಂಡ ತುತ್ತಾಗಬೇಕಾಗಿ ಪರಿಸ್ಥಿತಿ ಬಂದಿತ್ತು. ಮಿಥುನ್ ಚಕ್ರವರ್ತಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದ
ಬಿರುಗಾಳಿಯ ಅವಕೃಪೆಗೆ ತುತ್ತಾಗಿ ತೂರಿಹೋದ 'ದ ವಿಲನ್' ಸೆಟ್!
ಬಿರುಗಾಳಿಯ ಅವಕೃಪೆಗೆ ತುತ್ತಾಗಿ ತೂರಿಹೋದ 'ದ ವಿಲನ್' ಸೆಟ್!
Updated on
ಬೆಂಗಳೂರು: ಸುಂಟರಗಾಳಿ ಮತ್ತು ಬಿರುಗಾಳಿಯ ಅವಕೃಪೆಗೆ ಪ್ರೇಮ್ ನಿರ್ದೇಶನದ 'ದ ವಿಲನ್' ಚಿತ್ರತಂಡ ತುತ್ತಾಗಬೇಕಾಗಿ ಪರಿಸ್ಥಿತಿ ಬಂದಿತ್ತು. ಮಿಥುನ್ ಚಕ್ರವರ್ತಿ ಅವರ ಭಾಗದ ಚಿತ್ರೀಕರಣ ಮುಗಿಸಿದ್ದ ನಿರ್ದೇಶಕ, ಬೆಳಗಾವಿಯ ಝಳ ಝಳ ಬಿಸಿಲಿನಲ್ಲಿ ಸುದೀಪ್ ಅವರ ಭಾಗವನ್ನು ಶೂಟ್ ಮಾಡುತ್ತಿದ್ದರು. ೪೨ಡಿಗ್ರಿ ಉಷ್ಣಾಂಶದಲ್ಲಿ ನಡೆಯುತ್ತಿದ್ದ ಚಿತ್ರೀಕರಣ ಇನ್ನೇನು ಮುಗಿಸಬೇಕು ಎನ್ನುವಷ್ಟರದಲ್ಲಿ ಬೀಸಿದ ಬಿರುಗಾಳಿ, ಹಾಕಿದ್ದ ಸೆಟ್ ಅನ್ನೇ ತೂರಿಕೊಂಡು ಹೋಗಿದೆ. 
ಕೆಲವು ದೃಶ್ಯಗಳಲ್ಲಿ ಕೃತಕ ಬಿರುಗಾಳಿ ಬೀಸುವಂತೆ ಮಾಡಲು ವಿಶೇಷ ಫ್ಯಾನ್ ಗಳನ್ನೂ ಅಲ್ಲಿ ಅನುಷ್ಠಾನ ಮಾಡಿದ್ದರಂತೆ. ಆದರೆ ನಿಜಕ್ಕೂ ಬೀಸಿದ ಬಿರುಗಾಳಿ ಅವುಗಳನ್ನು ಧ್ವಂಸ ಮಾಡಿದೆ. "ಗಾಳಿ ಎಷ್ಟು ವೇಗವಾಗಿ ಬೀಸಿತೆಂದರೆ, ಬಹುತೇಕ ನಮ್ಮನ್ನು ತೂರಿಸಿಕೊಂಡು ಹೋಗುವಂತಿತ್ತು. ನಾನು ಮತ್ತು ಸುದೀಪ್ ಒಬ್ಬರನ್ನೊಬ್ಬರು ಬಿಗಿಯಾಗಿ ಹಿಡಿಯುಕೊಂಡಿದ್ದರೆ, ನಮ್ಮನ್ನು ರಕ್ಷಿಸಲು ೧೦ ಜನ ಸುತ್ತುವರಿದಿದ್ದರು. ಅಲ್ಲದೆ ಸೆಟ್ ನಲ್ಲಿ ೩೦೦ ಜನರ ಚಿತ್ರತಂಡ ನೆರೆದಿತ್ತು. ಎಲ್ಲರಿಗು ಉಸಿರಾಟವೇ ಕಷ್ಟವಾಗಿ ಹೋಯಿತು" ಎಂದು ವಿವರಿಸುವ ನಿರ್ದೇಶಕ ಯಾವುದೇ ಹಾನಿಯಾಗದೆ ಎಲ್ಲರು ಉಳಿದುಕೊಂಡಿದ್ದೆ ಅದೃಷ್ಟ ಎನ್ನುತ್ತಾರೆ. 
ಆದರೆ ಚಿತ್ರೀಕರಣಕ್ಕಾಗಿ ಹಾಕಿದ್ದ ಇಡೀ ಸೆಟ್ ಬಿರುಗಾಳಿಗೆ ಧ್ವಂಸವಾಯಿತಂತೆ. "ಇದರ ನಷ್ಟ ಲೆಕ್ಕ ಹಾಕುವ ಮನಸ್ಥಿತಿಯಲ್ಲಿ ಸದ್ಯಕ್ಕೆ ನಾನಿಲ್ಲ. ಶೂಟಿಂಗ್ ನೋಡಲು ಬಂದಿದ್ದವರು ಕೂಡ ಎಲ್ಲರು ಸುರಕ್ಷಿತವಾಗಿದ್ದಾರೆ ಎಂಬುದೇ ನನಗೆ ನೆಮ್ಮದಿ" ಎನ್ನುವ ಪ್ರೇಮ್ ಈ ದೃಶ್ಯವನ್ನು ಸಿನೆಮಾದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದಾರೆ ಕೂಡ. 
ಈಗ ಬೆಳಗಾವಿಯ ಚಿತ್ರೀಕರಣದ ನಂತರ ಚಿತ್ರತಂಡ ಲಂಡನ್ ಗೆ ತೆರಳಲಿದೆ. ಅಲ್ಲಿ ಶಿವರಾಜ್ ಕುಮಾರ್ ಮತ್ತು ಅಮಿ ಜಾಕ್ಸನ್ ಅವರನ್ನೊಳಗೊಂಡ ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com