ದಿಗಂತ್ ಬ್ಯಾಚುಲರ್ ಮತ್ತು ರೆಸಾರ್ಟ್ ಮಾಲೀಕನ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ರೆಸಾರ್ಟ್ ಉದ್ದಾರಕ್ಕಾಗಿ ದಿಗಂತ ಪರಿಶ್ರಮಿಸುತ್ತಿರುತ್ತಾನೆ. ಆಗ ರೆಸಾರ್ಟ್ ಗೆ ಪೂಜಾ ದೇವಾರಿಯರ ಆಗಮನವಾಗುತ್ತದೆ. ನಂತರ ಏನೇನೆಲ್ಲಾ ಆಗುತ್ತದೆ ಎಂಬುದೇ ಚಿತ್ರದ ಕಥೆ. ಹೀಗೆ ಚಿತ್ರದ ಎಳೆಯೊಂದನ್ನು ಕಾರ್ಯಕಾರಿ ನಿರ್ಮಾಪಕ ವಿನೋದ್ ಬಿಟ್ಟುಕೊಟ್ಟಿದ್ದಾರೆ.