ದಶಕಗಳ ನಂತರ ಮತ್ತೆ ತೆರೆಯ ಮೇಲೆ ನಾಯಕನಾಗಿ ರೆಬೆಲ್ ಸ್ಟಾರ್: ಅತಿಥಿ ಪಾತ್ರದಲ್ಲಿ ಸುದೀಪ್!

ಸ್ಯಾಂಡಲ್ ವುಡ್ ನಲ್ಲಿ ರೆಬೆಲ್ ಸ್ಟಾರ್ ಎಂದೇ ಚಿರಪರಿತರಾಗಿರುವ ಅಂಬರೀಷ್ ದಶಕಗಳು ಕಳೆದರು ತನ್ನ ಸ್ಟಾರ್ ಪವರ್...
ಅಂಬರೀಷ್ ಮತ್ತು ಸುದೀಪ್
ಅಂಬರೀಷ್ ಮತ್ತು ಸುದೀಪ್
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ರೆಬೆಲ್ ಸ್ಟಾರ್ ಎಂದೇ ಚಿರಪರಿತರಾಗಿರುವ ಅಂಬರೀಷ್ ದಶಕಗಳು ಕಳೆದರು ತನ್ನ ಸ್ಟಾರ್ ಪವರ್ ಹಾಗೂ ಗತ್ತನ್ನು ಹಾಗೆ ಉಳಿಸಿಕೊಂಡು ಬಂದಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲಿನ ಅವರ ನಟನೆ ವಿಶೇಷವಾಗಿರುತ್ತದೆ,
ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಷ್ ಅವರ ಬಗ್ಗೆ ಹೊಸ ವಿಷಯವೊಂದು ಹೊರಬಿದ್ದಿದೆ. ಇತ್ತೀಚಿನ ದಿನಗಳಲ್ಲಿ ಕೇವಲ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಂಬಿ, ಈಗ ಹೊಸ ಚಿತ್ರವೊಂದರಲ್ಲಿ ಪೂರ್ಣ ಪ್ರಮಾಣದ ನಾಯಕನಾಗಿ ನಟಿಸುತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಅವರ ವಯಸ್ಸು ಹಾಗೂ ವ್ಯಕ್ತಿತ್ವಕ್ಕೆ ಹೊಂದುವ ಹಾಗೆ ಕಥೆಯನ್ನು ಹೆಣೆಯಲಾಗಿದೆಯಂತೆ, ಅಂಬರೀಷ್ ಮುಂದಿನ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸಲಿದ್ದಾರೆ. ಅಂಬಿ ನಿಂಗೆ ವಯಸ್ಸಾಯ್ತೋ ಎಂದು ಟೈಟಲ್ ಇಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಈ ಸಿನಿಮಾದ ಮತ್ತೆರಡು ವಿಶೇಷತೆಯೆಂದರೇ, ಕಿಚ್ಚ ಸುದೀಪ್ ಬ್ಯಾನರ್ ನ ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಸುದೀಪ್ ಈ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲು ಅಂಬರೀಷ್ ಸಮ್ಮತಿಸಿದ್ದಾರೆ ಎಂದು ಹೇಳಲಾಗಿದೆ, ನಿರ್ದೇಶಕ ನಂದಕಿಶೋರ್ ಸದ್ಯ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದಲ್ಲಿ ಬ್ಯುಸಿಯಾಗಿದ್ದು ಆ ಪ್ರಾಜೆಕ್ಟ್ ಪೂರ್ಣಗೊಂಡ ನಂತರ ಅಂಬರೀಷ್ ಸಿನಿಮಾ   ಕೈಗೆತ್ತಿಕೊಳ್ಳಲಿದ್ದಾರೆ.
ನಂದಕಿಶೋರ್ ಮತ್ತು ಸುದೀಪ್ ಕಾಂಬಿನೇಷನ್ ನಲ್ಲಿ ಈಗಾಗಲೇ ಹಲವು ಬಿಗ್ ಹಿಟ್ ಸಿನಿಮಾಗಳು ಮೂಡಿ ಬಂದಿದ್ದು, ಸದ್ಯ ಮೂವರು ಬೆಳ್ಳಿ ತೆರೆಯ ಮೇಲೆ ಹೊಸದೊಂದು ಇತಿಹಾಸ ಬರೆಯಲು ಹೊರಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com