ಶ್ರೀ ರೆಡ್ಡಿ ಅವರು ಸಾರ್ವಜನಿಕವಾಗಿ ತೋರಿದ ವರ್ತನೆಯಿಂದಾಗಿ ಸಂಘ ಮುಜುಗರಕ್ಕೀಡಾಗಿದ್ದು, ಅವರ ದುರ್ವರ್ತನೆಯಿಂದಾಗಿಯೇ ಅವರಿಗೆ ಸದಸ್ಯತ್ವ ನೀಡಲು ಸಾದ್ಯವಿಲ್ಲ. ಅವರು ಈ ಮೊದಲು ಸಂಘದ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರು ಸಲ್ಲಿಸಿದ್ದ ಅರ್ಜಿ ಸಮರ್ಪಕವಾಗಿರಲಿಲ್ಲ ಎಂದು ಸಂಘದ ಅಧಿಕಾರಿ ಶಿವಾಜಿ ರಾಜ ಅವರು ತಿಳಿಸಿದ್ದಾರೆ. ಒಂದು ವೇಳೆ ಶ್ರೀರೆಡ್ಡಿ ಕುರಿತು ಸಂಘ ಮೃದು ಧೋರಣೆ ಅನುಸರಿಸಿದರೆ, ಭವಿಷ್ಯದ ನಟ ನಟಿಯರೂ ಇದೇ ದಾರಿ ತುಳಿಯುವ ಅಪಾಯವಿದೆ. ಹೀಗಾಗಿ ಶ್ರೀರೆಡ್ಡಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.