ಕೇರಳದಲ್ಲಿ ಆನೆ ಜೊತೆಗೆ ಫೋಟೋ ಶೂಟ್ ಮಾಡಿದ 'ಭರಣಿ' ಚಿತ್ರತಂಡ

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ...
ಭರಣಿ ಚಿತ್ರದ ಫೋಟೋಶೂಟ್
ಭರಣಿ ಚಿತ್ರದ ಫೋಟೋಶೂಟ್
Updated on

ಚೊಚ್ಚಲ ನಿರ್ದೇಶಕ ಚರಣ್ ರಾಜ್ ನಟರಾದ ಮಾಧವ ಮತ್ತು ಸ್ವಾತಿ ಕೊಂಡೆಯ ಜೊತೆ ದೇವರನಾಡು ಕೇರಳಕ್ಕೆ ಕಾಲಿಟ್ಟಿದ್ದು ತಮ್ಮ ಚಿತ್ರದ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಯಾಕೆಂದರೆ ಚಿತ್ರದಲ್ಲಿ ಆನೆ ಮುಖ್ಯ ಪಾತ್ರ ವಹಿಸುತ್ತದೆ. ಮತ್ತು ಚಿತ್ರದ ಒಂದು ಭಾಗದಲ್ಲಿ ಆನೆಯ ಸುತ್ತಲೇ ಕಥೆ ಸುತ್ತುತ್ತದೆ. ಹೀಗಾಗಿ ಆನೆಯ ಜೊತೆಗೆ ನಿಂತು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.

ಆನೆಯ ಜೊತೆಗೆ ಫೋಟೋ ಶೂಟ್ ಮಾಡಿಸಿಕೊಳ್ಳಲು ಪ್ರಾಣಿ ಮಂಡಳಿಯಿಂದ ಅನುಮತಿ ಪಡೆಯಲು ನಾಲ್ಕು ತಿಂಗಳು ಹಿಡಿಯಿತು ಎನ್ನುತ್ತಾರೆ  ಚರಣ್ ರಾಜ್.

ಪ್ರಾಣಿ ಮಂಡಳಿಯಿಂದ ಅನುಮತಿ ಸಿಕ್ಕಿದ ಕೂಡಲೇ ಕಳೆದ ಭಾನುವಾರ ಚಿತ್ರತಂಡ ಕೇರಳಕ್ಕೆ ಪ್ರಯಾಣ ಬೆಳೆಸಿತು. ಕೃಷ್ಣಪುರಂನಲ್ಲಿ ಶೂಟ್ ಮಾಡಿದರು, ಆ ಸಂದರ್ಭದಲ್ಲಿ ಅಲ್ಲಿ ಯಾವುದೇ ಜೋರು ಮಳೆ, ನೆರೆ ಪ್ರವಾಹ ಬಂದಿರಲಿಲ್ಲವಂತೆ.

ಪಾರ್ವತಮ್ಮನ ಮಗ ಎಂಬ ಟ್ಯಾಗ್ ಲೈನ್ ನೊಂದಿಗೆ ಭರಣಿ ಚಿತ್ರದ ಮುಹೂರ್ತ ಸೆಪ್ಟೆಂಬರ್ ಮೊದಲ ವಾರದಲ್ಲಿ ನಡೆಯಲಿದೆ. ರಾಜ್ ಕುಮಾರ್ ಕುಟುಂಬದವರಲ್ಲಿ ಯಾರಾದರೊಬ್ಬರು ಚಿತ್ರ ಮುಹೂರ್ತಕ್ಕೆ ಚಾಲನೆ ನೀಡಬೇಕೆಂದು ಆಶಿಸುತ್ತೇವೆ. ಶಿವರಾಜ್ ಕುಮಾರ್ ಅವರ ಜೊತೆ ಮಾತುಕತೆ ನಡೆಸಿದ್ದು ಅವರು ಸಿಗುವ ದಿನಾಂಕಕ್ಕೆ ತಕ್ಕಂತೆ ಮುಹೂರ್ತ ಇಟ್ಟುಕೊಳ್ಳಲಿದ್ದೇವೆ ಎಂದರು.

ಯೋಗೇಶ್ ಅವರು ಸಾಜಿದ್ ಖುರೇಷಿ ಅವರ ಸಹಾಯದೊಂದಿಗೆ ಚಿತ್ರ ನಿರ್ಮಿಸುತ್ತಿದ್ದಾರೆ. ಸಾಜಿದ್ ನಾಗರಹಾವು ಚಿತ್ರ ತಯಾರಿಸಿದವರು. ವಿವೇಕ್ ಚಕ್ರವರ್ತಿ ಅವರ ಸಂಗೀತ ಮತ್ತು ಕೆ ಆರ್ ಶಿವಕುಮಾರ್ ಅವರ ಛಾಯಾಗ್ರಹಣವಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com