ಅದರಲ್ಲೂ ಚಿತ್ರದುರ್ಗದಲ್ಲಿ ಗಂಡನ ಎದುರೇ ಪತ್ನಿಯೇ ಮೇಲೆ ಅತ್ಯಾಚಾರ ನಡೆಸಿ ಕ್ರೌರ್ಯ ಮೆರೆದಿದ್ದ. 2011ರ ಮೇ. 5 ರಂದು ವಿಜಯಪುರದ ಏಳಗಿ ಗ್ರಾಮಕ್ಕೆ ಹೋಗಿದ್ದ ಜೈಶಂಕರ, ಅಲ್ಲಿ ಗದ್ದೆಯಲ್ಲಿ ಏಕಾಂಗಿಯಾಗಿ ಕೆಲಸ ಮಾಡುತ್ತಿದ್ದ ಚಂದ್ರಕಲಾ ಎಂಬುವವರ ಮೇಲೆ ಎರಗಿದ್ದ. ಆದರೆ, ಆ ವೇಳೆ ಆಕೆ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ್ದ ಅಕ್ಕಪಕ್ಕದ ಜಮೀನಿನಲ್ಲಿದ್ದ ರೈತರು, ಶಂಕರನನ್ನು ಹಿಡಿದು ಮನಬಂದಂತೆ ಥಳಿಸಿದ್ದರು. ಆಗ ಆತನನ್ನು ವಶಕ್ಕೆ ಪಡೆದ ಪೊಲೀಸರು, ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾ ಆತನ ಇತಿಹಾಸ ಕೇಳಿ ಬೇಸ್ತು ಬಿದ್ದಿದ್ದರು.