ಸದ್ಯ ಚಿತ್ರದ 40ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಮುಂದಿನ ಶೆಡ್ಯೂಲ್ ಜನವರಿ 10ರಿಂದ ಪ್ರಾರಂಭವಾಗಲಿದೆ ಎಂದರು. ಚಿತ್ರದಲ್ಲಿ ಮತ್ತೊಂದು ಆಕರ್ಷಣೆ ಎಂದರೆ ಹಾಡುಗಾರ ಕೈಲಾಶ್ ಖೇರ್. ಚಿತ್ರದ ಕವ್ವಾಲಿ ಹಾಡನ್ನು ಆಡಿದ್ದಾರೆ. ಸುನಂದ ಗೌತಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರವಿಶಂಕರ್, ದತ್ತಣ್ಣ, ಬಿ.ಸುರೇಶ್ ಮತ್ತು ನೈನಾ ಸೇರಿದಂತೆ ಹಲವು ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.