ಚೂರಿಕಟ್ಟೆ ಚಿತ್ರದಲ್ಲಿ ನಾಯಕನಿಗಿಂತ ಪಿಸ್ತೂಲ್ ಪಾತ್ರ ದೊಡ್ಡದು!

ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು...
ಚೂರಿಕಟ್ಟೆ
ಚೂರಿಕಟ್ಟೆ
Updated on
ಚೌಕಬಾರ ಎಂಬ ಕಿರು ಚಿತ್ರದ ಯಶಸ್ಸ ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಸಾಧ್ಯವಾಯಿತು. ಕಿರು ಚಿತ್ರಗಳು ತಂತ್ರಜ್ಞನರನ್ನು ಜನರಿಗೆ ಪರಿಚಯಿಸುತ್ತದೆ ಮತ್ತು ಅವರಲ್ಲಿನ ಸಾಮರ್ಥ್ಯ ಮತ್ತು ವಿಶ್ವಾಸವನ್ನು ಬೆಳೆಸುತ್ತದೆ ಎಂದು ಚೂರಿಕಟ್ಟೆ ನಿರ್ದೇಶಕ ರಘು ಹೇಳಿದ್ದಾರೆ. 
ಕಿರು ಚಿತ್ರಗಳು ತನ್ನದೇ ಆದ ಮಿತಿಗಳನ್ನು ಹೊಂದಿದ್ದರೂ ಅದು ವಿಭಿನ್ನ ಪ್ರೇಕ್ಷಕರನ್ನು ತಲುಪಿತು. ಅದೃಷ್ಟವಶಾತ್ ಇದು ವಿಮರ್ಶಾತ್ಮಕ ಮೆಚ್ಚುಗೆ ಮತ್ತು ಪ್ರಶಸ್ತಿಗಳನ್ನು ಗೆದ್ದಿದೆ. ಈ ಗುರುತು ಚೂರಿಕಟ್ಟೆ ಚಿತ್ರವನ್ನು ನಿರ್ದೇಶಿಸಲು ಪ್ರೇರಣೆಯಾಯಿತು ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರಕಥೆ ಆಸಕ್ತಿದಾಯಕ ಹಿನ್ನಲೆ ಹೊಂದಿದೆ. ಪಿಸ್ತೂಲ್ ಈ ಚಿತ್ರಕ್ಕೆ ಸ್ಕ್ರಿಫ್ಟ್ ಗೆ ಸ್ಫೂರ್ತಿ ನೀಡಿತು. ಚಿತ್ರದಲ್ಲಿ ಪ್ರವೀಣ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಪಿಸ್ತೂಲ್ ನಮ್ಮ ನಾಯಕನಿಗಿಂತ ದೊಡ್ಡ ಪಾತ್ರವಹಿಸಲಿದ್ದು ಚಿತ್ರದಲ್ಲಿನ ಪ್ರತಿ ಪಾತ್ರದ ಜೀವನದ ಮೇಲೆ ಪ್ರಭಾವ ಬೀರುತ್ತದೆ ಎಂದರು. 
ಚೂರಿಕಟ್ಟೆ ಟಿಂಬರ್ ಮಾಫಿಯಾ ಜಗತ್ತಿನ ಕುರಿತಾದ ಚಿತ್ರಕಥೆ ಹೊಂದಿದೆ ಮತ್ತು ಒಂದು ನಿಮಿಷದಲ್ಲಿ ಕೋಪದಿಂದ ಹೊರಬರುವ ನಿರ್ಧಾರಗಳಿಂದ ಜನರ ಜೀವನವು ಹೇಗೆ ಬದಲಾಗುತ್ತದೆ. ಇದು ಅವರ ಸುತ್ತಲಿರುವ ಜನರ ಜೀವನದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಸ್ಥಳೀಯ ರಾಜಕೀಯ ವ್ಯವಸ್ಥೆಯನ್ನು ರೂಪಿಸುತ್ತದೆ. ಚಿತ್ರವು ಚೂರಿಕಟ್ಟೆ ಎಂಬ ಸಣ್ಣ ಹಳ್ಳಿಯಲ್ಲಿದೆ. ಆದರೆ ಇದು ಭಯವನ್ನುಂಟು ಮಾಡುತ್ತದೆ ಎಂದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ರಘು ಹೇಳಿದ್ದಾರೆ. 
ಚೂರಿಕಟ್ಟೆ ಚಿತ್ರವನ್ನು ಎಸ್ ನಯಾಝುದ್ದೀನ್ ಮತ್ತು ಎಂ ತುಳಸಿರಾಮುಡು ಎಂಬುದು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಶರತ್ ಲೋಹಿತಾಶ್ವ, ಪ್ರೇರಣ ಕಂಬಂ, ಬಾಲಾಜಿ ಮನೋಹರ್, ಮಂಜುನಾಥ್ ಹೆಗಡೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com