ಟಗರು ಯಶಸ್ಸಿನ ಗುಂಗಿನಲ್ಲಿರುವ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ , ನಿರ್ದೇಶಕ ಯೋಗರಾಜ್ ಭಟ್ ಜೊತೆಗೆ ಹೊಸ ಚಿತ್ರ ಮಾಡುವುದು ಪಕ್ಕಾ ಆಗಿದೆ. ಯೋಗರಾಜ್ ಭಟ್ ಅವರ ಮುಂದಿನ ಚಿತ್ರ ಪಂಚತಂತ್ರ ಮುಗಿದ ತಕ್ಷಣ ಶಿವರಾಜ್ ಕುಮಾರ್ ಗೆ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ನಿರ್ಮಾಪಕರು ಸ್ಪಷ್ಪಪಡಿಸಿದ್ದಾರೆ.
ಯೋಗರಾಜ್ ಭಟ್ . ಮುಂಗಾರು ಮಳೆ ಖ್ಯಾತಿಯ ನಿರ್ದೇಶಕರು. ಬಹುತೇಕ ಪ್ರೇಮ-ವಿಷಯದ ಚಿತ್ರಗಳಲ್ಲಿಯೇ ಹೆಚ್ಚು ಕೆಲಸ ಮಾಡಿದ್ದಾರೆ. ಈ ಸಾಹಸ ಚಿತ್ರದ ಮೂಲಕ ಏಕಾತನದ ಚಿತ್ರದಿಂದ ಹೊರಬರುವ ವಿಶ್ವಾಸದಲ್ಲಿದ್ದಾರೆ.
"ಚಿತ್ರವು ಯಾರೊಂದಿಗೂ ಸಂಬಂಧ ಹೊಂದಬಹುದು ಎನ್ನುವುದು ಕುತೂಹಲ ಮೂಡಿಸಿದೆ. ಜೊತೆಗೆ, ಯೋಗರಾಜ್ ಅವರು ಆಕ್ಷನ್-ಆಧಾರಿತ ವಿಷಯ ಇಟ್ಟುಕೊಂಡು ಚಿತ್ರ ಮಾಡುತ್ತಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.
ರಶ್ಮಿ ಪ್ರೋಡಕ್ಷನ್ ಅಡಿಯಲ್ಲಿ ಭಾಸ್ಕರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ಒಂದು ಸಾಲು ಕೇಳಿಯೇ ಶಿವಣ್ಣ ಅಭಿನಯಿಸುವುದಾಗಿ ಒಪ್ಪಿಕೊಂಡಿದ್ದು, ಇದು ಆಕ್ಸನ್, ಥ್ರಿಲ್ಲರ್ ಸಿನಿಮಾ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬರುತ್ತಿವೆ.
ನಿರ್ಮಾಪಕ ಭಾಸ್ಕರ್ ಈ ಹಿಂದೆಯೇ ಅಂದರ್ ಬಾಹರ್ ಸಿನಿಮಾದಲ್ಲಿ ಶಿವಣ್ಣನೊಂದಿಗೆ ಕೆಲಸ ಮಾಡಿದ್ದಾರೆ. ಇದು ಶಿವಣ್ಣನೊಂದಿಗೆ ಎರಡನೇ ಸಿನಿಮಾ ಆಗಿದ್ದು, ಶಿವಣ್ಣನಿಗೆ ಚಿತ್ರಗಳ ಮೇಲೆ ಚಿತ್ರಗಳು ಬರುತ್ತಿದ್ದು, ಯಾವ ಚಿತ್ರ ಒಪ್ಪಿಕೊಳ್ಳಬೇಕು, ಬಿಡಬೇಕು ಎಂಬುದೇ ದೊಡ್ಡ ಆಯಾಸವಾಗಿದೆ.