ಇಮ್ರಾನ್ ಸರ್ದಾರಿಯಾ ಅವರು ಗೀತೆ ಸಂಯೋಜನೆ ಮಾಡಿದ್ದಾರೆ, ಯೋಗರಾಜ್ ಭಟ್ ಅವರು ಗೀತೆಯೊಂದರ ಸಾಹಿತ್ಯವನ್ನು ಬರೆದಿದ್ದಾರೆ. ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಯಾವ ತರಹದ ಗ್ಯಾಪ್ ಇದೆ ಹಾಗೂ ಮನಸ್ಥಿತಿಗಳು ಹೇಗೆ ಬದಲಾಗಿದೆ. ಯುವ ಜನತೆಯಲ್ಲಿರುವ ಗೊಂದಲಗಳನ್ನೇ ಆಧಾರವಾಗಿಟ್ಟುಕೊಂಡು 'ಈ ವಯಸ್ಸಲ್ಲಿ ಏನ್ ಮಾಡೋದು ಗೊತ್ತಾಗೋದಿಲ್ಲ' ಎಂಬ ಗೀತೆಯನ್ನು ರಚನೆ ಮಾಡಿದ್ದು, ಈ ಹಾಡು ಜನರ ಮನಗೆಲ್ಲುವುದು ಖಚಿತ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.