ಬೆಂಗಳೂರಿನಲ್ಲಿ ಕಳೆದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಹಿರಿಯ ನಟ ಶರತ್ ಕುಮಾರ್!

ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಟಿಸಿರುವ ದಕ್ಷಿಣ ಭಾರತದ ನಟ ಶರತ್ ಕುಮಾರ್ ಅವರು ತಾವು ಹಿಂದೆ...
ಶರತ್ ಕುಮಾರ್
ಶರತ್ ಕುಮಾರ್
ಸ್ಯಾಂಡಲ್ವುಡ್ ನ ಯುವರಾಜ ನಿಖಿಲ್ ಕುಮಾರ್ ಅಭಿನಯದ ಸೀತಾರಾಮ ಕಲ್ಯಾಣ ಚಿತ್ರದಲ್ಲಿ ನಟಿಸಿರುವ ದಕ್ಷಿಣ ಭಾರತದ ನಟ ಶರತ್ ಕುಮಾರ್ ಅವರು ತಾವು ಹಿಂದೆ ಬೆಂಗಳೂರಿನಲ್ಲಿ ಕಳೆದಿದ್ದ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 
ಶರತ್ ಕುಮಾರ್ ಅವರು ಸದ್ಯ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸುತ್ತಿದ್ದು ನಟ ಕಮ್ ರಾಜಕಾರಣಿ ಶರತ್ ಕುಮಾರ್ ಅವರು 70ರ ದಶಕದಲ್ಲಿ ಬೆಂಗಳೂರಿನಲ್ಲಿ ನ್ಯೂಸ್ ಪೇಪರ್ ಬಾಯ್ ಆಗಿ ಕೆಲಸ ಮಾಡಿದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. 
ತಮಿಳಿನ ದಿನಕರನ್ ಪತ್ರಿಕೆಯ ಡೀಲರ್ ಶಿಪ್ ತೆಗೆದುಕೊಂಡಿದ್ದ ನಾನು ಬೆಳಗ್ಗೆ 5 ಗಂಟೆಗೆ ಎದ್ದು ಜಯನಗರ ಸುತ್ತ ಮುತ್ತ ಮನೆಗಳಿಗೆ ಪತ್ರಿಕೆಯನ್ನು ಹಾಕುತ್ತಿದ್ದೆ. ನನ್ನ ಜೀವನ ಶುರುವಾಗಿದ್ದೆ ಬೆಂಗಳೂರಿನಲ್ಲಿ ಹೀಗಾಗಿ ನಾನು ಬೆಂಗಳೂರಿಗೆ ಬಂದಾಗೆಲ್ಲಾ ಆ ನೆನಪುಗಳು ಮರುಕಳಿಸುತ್ತವೆ ಎಂದು ಹೇಳಿದರು. 
ನಂತರ ಪತ್ರಿಕೆಯೊಂದರಲ್ಲಿ ಕೆಲಸ ಸಿಕ್ಕ ನಿಮಿತ್ತ ಶರತ್ ಕುಮಾರ್ ಅವರು ಚೆನ್ನೈಗೆ ತೆರಳಿದ್ದು ಆನಂತರ ಅವರು ಹಿಂದೆ ತಿರುಗಿ ನೋಡಿಲ್ಲ. ದರ್ಶನ್ ಅಭಿನಯದ ಸಾರಥಿ ಚಿತ್ರದಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. 
ಆ ಬಳಿಕ ಮೈನಾ, ಸಂತೆಯಲ್ಲಿ ನಿಂತ ಕಬೀರ ಮತ್ತು ಪುನೀತ್ ರಾಜಕುಮಾರ್ ಅಭಿನಯದ ರಾಜಕುಮಾರ ಚಿತ್ರದಲ್ಲಿ ಅಭಿನಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com