ಇನ್ನು ಕನ್ನಡದ ಚಿತ್ರರಂಗದ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಮೂರು ನಟರನ್ನು ಬಿಂಬಿಸಲಾಗುತ್ತಿದೆ. ರಾಜಕುಮಾರರನ್ನು ಬ್ರಹ್ಮ, ವಿಷ್ಣುವಾಗಿ ವಿಷ್ಣುವರ್ಧನ ಹಾಗೂ ಮಹೇಶ್ವರನಾಗಿ ಅಂಬರೀಶ್ ಅವರನ್ನು ನೋಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೂವರು ದಿಗ್ಗಜ ನಟರ ಸ್ಮಾರಕ ಒಂದೇ ಕಡೆ ಇರಲಿ ಎಂಬ ಉದ್ದೇಶವನ್ನು ಹೊಂದಿರುವ ರಾಜ್ಯ ಸರ್ಕಾರ ಅಂಬರೀಶ್ ಅವರ ಅಂತ್ಯಸಂಸ್ಕಾರವನ್ನು ಕಂಠೀರವ ಸ್ಟುಡಿಯೋದಲ್ಲಿ ಮಾಡಲು ತೀರ್ಮಾನಿಸಿದೆ.