ನವ ನಿರ್ದೇಶಕನ ಕನಸಿಗೆ ಸಾಥ್ ನೀಡಿದ ಕ್ರೇಜಿಸ್ಟಾರ್ ಪುತ್ರ ಮನೋರಂಜನ್

ನವ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಿರ್ದೇಶಕರ ಕನಸು ಸಾಕಾರಗೊಳ್ಳಲು ಸಹಕರಿಸುತ್ತಿರುವ ಮನೋರಂಜನ್ ರವಿಚಂದ್ರನ್ ಇದೀಗ ಮತ್ತೊಬ್ಬ ನವ ನಿರ್ದೇಶಕನ...
ಮನೋರಂಜನ್
ಮನೋರಂಜನ್
ನವ ನಿರ್ದೇಶಕರ ಚಿತ್ರದಲ್ಲಿ ಅಭಿನಯಿಸುವ ಮೂಲಕ ನಿರ್ದೇಶಕರ ಕನಸು ಸಾಕಾರಗೊಳ್ಳಲು ಸಹಕರಿಸುತ್ತಿರುವ ಮನೋರಂಜನ್ ರವಿಚಂದ್ರನ್ ಇದೀಗ ಮತ್ತೊಬ್ಬ ನವ ನಿರ್ದೇಶಕನ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. 
ನವ ನಿರ್ದೇಶಕ ಮನು ಎಂಬುವರು ಮುಂದಿನ ನಿಲ್ದಾಣ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು ಈ ಚಿತ್ರದಲ್ಲಿ ಮನೋರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಮನು ಸ್ವತಂತ್ರ ನಿರ್ದೇಶಕರಾಗುವ ಮೊದಲು ಸಂಭಾಷಣೆ, ಕಥೆ ಮತ್ತು ಚಿತ್ರಕಥೆ ಬರೆಯುತ್ತಿದ್ದರು. 
ಮನೋರಂಜನ್ ಸದ್ಯ ನವ ನಿರ್ದೇಶಕರ ಚಿಲ್ಲುಂ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಮಧ್ಯೆ ಮುಂದಿನ ನಿಲ್ದಾಣ ಚಿತ್ರಕ್ಕೂ ಸಹಿ ಮಾಡಿದ್ದಾರೆ. 
ಮುಂದಿನ ನಿಲ್ದಾಣ ಚಿತ್ರವನ್ನು ಮನು ಸಹೋದರ ಜಗದೀಶ್ ಎಂಬುವರು ನಿರ್ಮಾಣ ಮಾಡುತ್ತಿದ್ದಾರೆ. ಮೈಸೂರು, ಬಳ್ಳಾರಿ ಚಿಕ್ಕಮಗಳೂರಿನಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ. ಅಕ್ಟೋಬರ್ ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com