'ಕರ್ಮಣ್ಯೇ ವಾಧಿಕಾರಸ್ತೇ' ಚೊಚ್ಚಲ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ

ಶ್ರೀ ಹರಿ ಆನಂದ್ ನಿರ್ದೇಶನ ಮಾಡಿರುವ ಚೊಚ್ಚಲ  ಚಿತ್ರಕ್ಕೆ 'ಕರ್ಮಣ್ಯೇ ವಾಧಿಕಾರಸ್ತೇ' ಎಂಬ ಶೀರ್ಷಿಕೆ ಇಡಲಾಗಿದೆ.  ಈ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ.
ದಿವ್ಯಾಗೌಡ, ಪ್ರತೀಕ್, ಸಿರಿಂಗ್
ದಿವ್ಯಾಗೌಡ, ಪ್ರತೀಕ್, ಸಿರಿಂಗ್
Updated on

ಬೆಂಗಳೂರು: ಶ್ರೀ ಹರಿ ಆನಂದ್ ನಿರ್ದೇಶನ ಮಾಡಿರುವ ಚೊಚ್ಚಲ  ಚಿತ್ರಕ್ಕೆ 'ಕರ್ಮಣ್ಯೇ ವಾಧಿಕಾರಸ್ತೇ' ಎಂಬ ಶೀರ್ಷಿಕೆ ಇಡಲಾಗಿದೆ.  ಈ ಚಿತ್ರದ ಮೂಲಕ ಪ್ರತೀಕ್ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ನೀಡುತ್ತಿದ್ದಾರೆ. ಅವರೊಂದಿಗೆ ದಿವ್ಯಾಗೌಡ ಹಾಗೂ ಸಿರಿಂಗ್ ದೊಲ್ಮಾ ನಾಯಕಿಯರಾಗಿ ಅಭಿನಯಿಸುತ್ತಿದ್ದಾರೆ.

ಮೂಲತ: ನೇಪಾಳದ ಸಿರಿಂಗ್ ಮುಂಬೈಯಲ್ಲಿ ನೆಲೆಸಿದ್ದಾರೆ. ನಮ್ಮ ಚಿತ್ರದಲ್ಲಿ ಆಕೆ ಚೀನಾದಿಂದ ಭಾರತಕ್ಕೆ ಒಂದು ವಾರಗಳ ಕಾಲ ಭೇಟಿ ನೀಡಿರುತ್ತಾರೆ ಎಂದು ನಿರ್ದೇಶಕ ಶ್ರೀಹರಿ ಚಿತ್ರದ ಟೀಸರ್ ಬಿಡುಗಡೆ ಸಂದರ್ಭದಲ್ಲಿ ತಿಳಿಸಿದರು. 

1850ರ ಕಾಲಘಟ್ಟದಿಂದ ಶುರುವಾಗಿ ಈಗಿನ ಕಾಲಘಟ್ಟದಲ್ಲಿ ಮುಗಿಯುವ ಕಥೆಯೊಂದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆಯಂತೆ. ಶ್ರೀಹರಿ ಈ ಹಿಂದೆ ಎರಡು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಆದರೆ, ಆ ಚಿತ್ರಗಳನ್ನು ಇನ್ನೂ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು.

ಖಿತ್ವಿಕ್ ಮುರುಳೀಧರ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು,  ಉದಯ್ ಲೀಲಾ ವಾಯಾಗ್ರಾಹಣ ಮಾಡಲಿದ್ದಾರೆ. ಸಂತೋಷ್ ನಾಯಕ್  ಹಾಗೂ ವಿಜಿತ್ ಚಂದ್ರ ಹಾಡುಗಳನ್ನು ಬರೆದಿದ್ದಾರೆ. ಪೋಸ್ಟ್ ಪ್ರೋಡಕ್ಷನ್ ಕೆಲಸ ನಡೆಯುತ್ತಿದ್ದು, ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com