ಸ್ಯಾಂಡಲ್ ವುಡ್ ನಲ್ಲಿ ಉತ್ತಮ ಅನುಭವವಾಗಿತ್ತು. ಗಣೇಶ್ ಜೊತೆಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದೆ, ನಂತರ ಯಾವ ಹಿರೋ ಜೊತೆಗೆ ಮತ್ತೆ ಕನ್ನಡದಲ್ಲಿ ಅಭಿನಯಿಸುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ. ಗಣೇಶ್ ನಿಜವಾಗಲೂ ಉತ್ತಮ ಪ್ರೋತ್ಸಾಹಕರು, ಈಗಲೂ ಅವರು ಅದೇ ರೀತಿಯಲ್ಲಿದ್ದಾರೆ,ಉತ್ತಮ ಕಥೆ, ಪಾತ್ರ ದೊರೆತರೆ, ಕನ್ನಡ ಚಿತ್ರರಂಗಕ್ಕೆ ಮರಳಿ ಬರುವುದಾಗಿ ತಿಳಿಸಿದರು.