ರಿಮೇಕ್ ಅಲ್ಲ ಸ್ವಮೇಕ್: ಮತ್ತೆ ನಿರ್ದೇಶನಕ್ಕಿಳಿದ ಸುದೀಪ್ ಸ್ಪಷ್ಟನೆ

ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು.
ಸುದೀಪ್
ಸುದೀಪ್
Updated on

ಬೆಂಗಳೂರು: ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಮತ್ತೆ ನಿರ್ದೇಶನಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಜೋರಾಗಿ ಕೇಳಿ ಬರುತ್ತಿತ್ತು. ಅದು ಯಾವ ಸಿನಿಮಾ, ರಿಮೇಕಾ ಇಲ್ಲ ಸ್ವಮೇಕಾ ಎಂಬ ಪ್ರಶ್ನೆಗಳು ಸಹ ಅಭಿನಯ ಚಕ್ರವರ್ತಿ ಅಭಿಮಾನಿಗಳಲ್ಲಿತ್ತು. ಈ ಕುತೂಹಲಕಾರಿ ಪ್ರಶ್ನೆಗೆ ಖುದ್ದು ಕಿಚ್ಚ ಸುದೀಪ್ ಅವರೇ ಉತ್ತರಿಸಿದ್ದಾರೆ.

'ಮೈ ಆಟೋಗ್ರಾಫ್' ಸಿನಿಮಾ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದ ಸುದೀಪ್ ನಟನೆಗೆ ಮಾತ್ರವಲ್ಲ ಆ್ಯಕ್ಷನ್ ಕಟ್​ಗೂ ಸೈ ಎಂದು ಮೊದಲ ಚಿತ್ರದಲ್ಲೇ ನಿರೂಪಿಸಿದ್ದರು. ಆ ಬಳಿಕ ನೋವು ನಲಿವಿನ ಕಥೆ ಹೇಳಿದ್ದ '73 ಶಾಂತಿ ನಿವಾಸ', ಮಾಸ್ ಪ್ರೇಕ್ಷಕರಿಗಾಗಿ 'ವೀರ ಮದಕರಿ', ಕೆಂಪೇಗೌಡ, ಯುವಪ್ರೇಮಿಗಳಿಗಾಗಿ ಜಸ್ಟ್ ಮಾತ್ ಮಾತಲ್ಲಿ' ಚಿತ್ರ ನಿರ್ದೇಶಿಸಿ ಸುದೀಪ್ ಮೋಡಿ ಮಾಡಿದ್ದರು.

ಅದರಲ್ಲೂ 2014ರಲ್ಲಿ 'ಮಾಣಿಕ್ಯ' ಚಿತ್ರವನ್ನು ನಟನೆಯೊಂದಿಗೆ ನಿರ್ದೇಶಿಸಿ ಬಾಕ್ಸಾಫೀಸ್​ನ್ನು ಕೊಳ್ಳೆ ಹೊಡೆದಿದ್ದರು. ಇದೀಗ ಐದು ವರ್ಷಗಳ ಬಳಿಕ ಮತ್ತೊಮ್ಮೆ ಡೈರೆಕ್ಟರ್ ಕ್ಯಾಪ್ ತೊಡಲು 'ಪೈಲ್ವಾನ್' ರೆಡಿಯಾಗುತ್ತಿದ್ದಾರೆ. 

'ನಾನು ನಿರ್ದೇಶಿಸುತ್ತಿರುವುದು ಒರಿಜಿನಲ್ ಸ್ಕ್ರಿಪ್ಟ್​. ಈ ಚಿತ್ರದ ಕಥೆಗಾಗಿ ನಮ್ಮ ತಂಡದ ಸದಸ್ಯರು ಈಗಾಗಲೇ ತೊಡಗಿಸಿಕೊಂಡಿದ್ದಾರೆ. ಆ ಕಥೆಯ ಬಗ್ಗೆ ನಾನು ಕೂಡ ಉತ್ಸುಕನಾಗಿದ್ದೇನೆ. ಶೀಘ್ರದಲ್ಲೇ ಈ ಸಿನಿಮಾ ಸೆಟ್ಟೇರಲಿದೆ' ಎಂದು ಸ್ಯಾಂಡಲ್​ವುಡ್ ಬಿಗ್ ಬಾಸ್ ಸುದೀಪ್ ತಿಳಿಸಿದ್ದಾರೆ.ಅಲ್ಲಿಗೆ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದ್ದ ರಿಮೇಕಾ, ಸ್ವಮೇಕಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಸದ್ಯ ಸುದೀಪ್ ಶಿವ ಕಾರ್ತಿಕ್ ನಿರ್ದೇಶನದ ಕೋಟಿಗೊಬ್ಬ-3 ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com