ನವೆಂಬರ್ ೧ಕ್ಕೆ ಲಗ್ಗೆಯಿಡಲಿದೆ ದಂಡುಪಾಳ್ಯಂ-೪

ಕ್ರೈಂ ಕಥಾಹಂದರದ  ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ  ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ  ಹೂಡಿದ್ದಾರೆ.
ದಂಡುಪಾಳ್ಯಂ 4
ದಂಡುಪಾಳ್ಯಂ 4
Updated on

ಬೆಂಗಳೂರು: ಕ್ರೈಂ ಕಥಾಹಂದರದ  ದಂಡುಪಾಳ್ಯಂ-೪ ಮುಂದಿನ ತಿಂಗಳು ನವೆಂಬರ್ ೧ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ  ಚಿತ್ರಕ್ಕೆ ಕೆ ಟಿ ನಾಯಕ್ ನಿರ್ದೇಶನವಿದ್ದು, ವೆಂಕಟ್ ಬಂಡವಾಳ  ಹೂಡಿದ್ದಾರೆ.

ಗುರುವಾರ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ನಟ ಧ್ರುವ ಸರ್ಜಾ, ಸಂಗೀತ  ನಿರ್ದೇಶಕ ಅರ್ಜುನ್ ಜನ್ಯ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಕಾರ್ಯದರ್ಶಿ  ಭಾ.ಮಾ ಹರೀಶ್, ಭಾ.ಮಾ ಗಿರೀಶ್ ಮೊದಲಾದವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಈವರೆಗೂ  ದಂಡುಪಾಳ್ಯ ಚಿತ್ರದ ೩ ಭಾಗಗಳು ತೆರೆಕಂಡಿವೆ  ನಾಲ್ಕನೆಯ ಭಾಗಕ್ಕೆ ದಂಡುಪಾಳ್ಯಂ ಎಂಬ  ಶೀರ್ಷಿಕೆಯಿದೆ.

ಕಾನೂನು ಎಷ್ಟೇ ಬಲವಾಗಿದ್ದರೂ, ಅಪರಾಧಗಳು ನಿಲ್ಲದು  ಅಂತೆಯೇ ಅಪರಾಧಿ  ಎಷ್ಟೇ ಚತುರಮತಿಯಾಗಿದ್ದರೂ, ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು  ಇದನ್ನೇ  ದಂಡುಪಾಳ್ಯಂನಲ್ಲಿ ತೋರಿಸಲಾಗಿದೆ.  ಜತೆಗೆ ಸಮಾಜದಲ್ಲಿ ಇಂತಹ ದುಷ್ಟರಿದ್ದು, ಒಂಟಿ  ಮಹಿಳೆಯರು, ವೃದ್ಧರು ಜಾಗ್ರತೆ ವಹಿಸಬೇಕೆಂಬ ಸಂದೇಶವಿದೆ ಎಂದು ನಿರ್ದೇಶಕ ಕೆ ಟಿ ನಾಯಕ್  ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com