ದಿವಂಗತ ನಟ ಕಾಶಿನಾಥ್ ಪುತ್ರ ಅಭಿಮನ್ಯು ಕಾಶಿನಾಥ್ ಅವರು ಮತ್ತೆ ಸ್ಯಾಂಡಲ್ವುಡ್ ಗೆ ಕಮ್ ಬ್ಯಾಕ್ ಮಾಡುತ್ತಿದ್ದು ಚಿತ್ರದ ಟೈಟಲ್ ಅನ್ನು ರಿಯಲ್ ಸ್ಟಾರ್ ಉಪೇಂದ್ರ ಲಾಂಚ್ ಮಾಡಿದರು.
ಕಿರಣ್ ಸೂರ್ಯ ಚೊಚ್ಚಲ ನಿರ್ದೇಶನದಲ್ಲಿ ಅಭಿಮನ್ಯು ನಟಿಸುತ್ತಿದ್ದಾರೆ. 70ರ ದಶಕದಲ್ಲಿ ಸೂಪರ್ ಹಿಟ್ ಗೀತೆಯಾಗಿದ್ದ ಎಲ್ಲಿಗೆ ಈ ಪಯಣ ಯಾವುದೋ ದಾರಿ ಚಿತ್ರದ ಸಾಲನ್ನೇ ಚಿತ್ರಕ್ಕೆ ಇಡಲಾಗಿದೆ.
ಎಲ್ಲಿಗೆ ಪಯಣ ಯಾವುದೋ ದಾರಿ ಶೀರ್ಷಿಕೆಯನ್ನು ಉಪೇಂದ್ರ ಅವರು ದೀಪಾವಳಿ ಪ್ರಯುಕ್ತ ಬಿಡುಗಡೆ ಮಾಡಿದರು. ಚಿತ್ರಕ್ಕೆ ನಂದೀಶ್ ಎಂಸಿ ಗೌಡ ಮತ್ತು ಜತೀನ್ ಪಿ ಪಟೇಲ್ ಬಂಡವಾಳ ಹೂಡುತ್ತಿದ್ದಾರೆ. ನವೆಂಬರ್ ನಲ್ಲಿ ಚಿತ್ರದ ಚಿತ್ರೀಕರಣ ಪ್ರಾರಂಭಗೊಳ್ಳಲಿದೆ.
ಎಸ್ ನಾರಾಯಣ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದು ಗೌತಮ್ ಮನು ಅವರ ಛಾಯಾಗ್ರಾಹಣವಿದೆ.
Advertisement
Advertisement