ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ
ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ

ಕರ್ಮ, ಪ್ರತೀಕಾರದ ಅವಶ್ಯಕತೆಯಿಲ್ಲ: ದರ್ಶನ್ ಪತ್ನಿ ನಿಗೂಢ ಟ್ವೀಟ್ ಯಾರಿಗೆ? 

ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಡಿರುವ ನಿಗೂಢ ಟ್ವೀಟ್ ವೊಂದು ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. 
Published on

ಬೆಂಗಳೂರು: ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮೀ ಅವರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಮಾಡಿರುವ ನಿಗೂಢ ಟ್ವೀಟ್ ವೊಂದು ಚಿತ್ರರಂಗದಲ್ಲಿ ಭಾರೀ ಕುತೂಹಲ ಮೂಡಿಸಿದೆ. 

ಕರ್ಮ, ಪ್ರತೀಕಾರದ ಅವಶ್ಯಕತೆಯೇ ಇಲ್ಲ, ಸುಮ್ಮನೆ ಕುಳಿತು ಕಾದು ನೋಡುತ್ತಿದ್ದರೆ ಸಾಕು. ನಿನ್ನನ್ನು ನೋಯಿಸಿದವರು ಕ್ರಮೇಣ ತಮ್ಮನ್ನು ತಾವೇ ನಾಶ ಮಾಡಿಕೊಳಅಳುತ್ತಾರೆ. ನೀವು ಅದೃಷ್ಟವಂತರಾಗಿದ್ದರೆ, ಅದನ್ನೆಲ್ಲ ನೋಡುವ ಅವಕಾಶವನ್ನೂ ದೇವರು ನಿಮಗೆ ನೀಡುತ್ತಾನೆಂದು ಟ್ವೀಟ್ ಮಾಡಿದ್ದಾರೆ. 

ಈ ಸಂದೇಶವನ್ನು ಚಪ್ಪಾಳೆ ಹಾಗೂ ನಗುಮುಖದ ಸ್ಮೈಲಿಗಳ ಜೊತೆಗೆ ಯಾರ ಹೆಸರನ್ನೂ ಹಾಕದೆ, ಯಾರಿಗೆ ತಲುಪಬೇಕೋ ಅವರಿಗೆ ತಲುವಂತೆ ವಿಜಯಲಕ್ಷ್ಮೀಯವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ಚಿತ್ರರಂದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ವಿಜಯಲಕ್ಷ್ಮೀ ಮತ್ತು ದರ್ಶನ್ ಸಾಂಸಾರಿಕ ಜೀವನದಲ್ಲಿ ಬಿರುಕು ಬಿಟ್ಟಿದ್ದ ಸುದ್ದಿಗಳು ಹಲವು ವರ್ಷಗಳ ಹಿಂದೆಯೇ ಬಂದಿದ್ದವು. ದರ್ಶನ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಕೆಲವು ವರ್ಷಗಳ ಹಿಂದೆ ವಿಜಯಲಕ್ಷ್ಮಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆಮೇಲೆ ಆ ಪ್ರಕರಣ ಸುಖಾಂತ್ಯ ಕಂಡಿತ್ತು. ನಂತರ ದರ್ಶನ್ ಮತ್ತು ವಿಜಯಲಕ್ಷ್ಮೀ ಜೊತೆಯಲ್ಲಿದ್ದಾರೆಂಬ ಸುದ್ದಿಗಳೂ ಬಂದಿದ್ದವು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com