ಕ್ರೇಜಿಸ್ಟಾರ್  ರವಿಚಂದ್ರನ್ ನಿರ್ದೇಶನದಲ್ಲಿ ಕೆಲಸ ಮಾಡೋದೆ ಅದೃಷ್ಟ- ಸುದೀಪ್ 

'ರವಿಬೊಪ್ಪಣ' ಚಿತ್ರದ ಸೆಟ್ ನಲ್ಲಿ ಮಾತನಾಡಿದ ಸುದೀಪ್, ರವಿಚಂದ್ರನ್ ನಿರ್ದೇಶನದಡಿಯಲ್ಲಿ ಕೆಲಸ ಮಾಡೋದೆ ಅದೃಷ್ಟ ಎಂದರು.
ರವಿಚಂದ್ರನ್, ಸುದೀಪ್
ರವಿಚಂದ್ರನ್, ಸುದೀಪ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ನಲ್ಲಿ ಮತ್ತೊಂದು ಚಿತ್ರ ಬರುತ್ತಿದೆ. ರವಿಚಂದ್ರನ್ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ವಕೀಲನ ಪಾತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದಾರೆ. 


'ರವಿಬೊಪ್ಪಣ' ಚಿತ್ರದ ಸೆಟ್ ನಲ್ಲಿ ಮಾತನಾಡಿದ ಸುದೀಪ್, ರವಿಚಂದ್ರನ್ ನಿರ್ದೇಶನದಡಿಯಲ್ಲಿ ಕೆಲಸ ಮಾಡೋದೆ ಅದೃಷ್ಟ ಎಂದರು.

ರವಿಚಂದ್ರನ್ ಮಕ್ಕಳಾದ ಮನೋರಂಜನ್ ಮತ್ತು ವಿಕ್ರಮ್ ಅವರಿಗಿಂತ ಮುಂಚಿತವಾಗಿ ರವಿಚಂದ್ರನ್ ನಿರ್ದೇಶನದಡಿಯಲ್ಲಿ ಕೆಲಸ ಮಾಡುವ ಅವಕಾಶ ಪಡೆದಿದ್ದೇನೆ. ಅವರು ಅನೇಕ ನಿರ್ದೇಶಕರಿಗೆ ಸ್ಪೂರ್ತಿದಾಯಕರಾಗಿದ್ದಾರೆ. ಹಳೆಯ ರವಿಚಂದ್ರನ್  ಆಗಿ ಮತ್ತೆ ಮಿಂಚಲು ನೋಡಬಯಸುತ್ತೇನೆ. ಇಂತಹ ಚಿತ್ರಗಳನ್ನು ಈ ಹಿಂದೆಯೇ ಮಾಡಿದ್ದಾರೆ ಎಂದು ಹೇಳಿದರು.  ರವಿಚಂದ್ರನ್ ನಿರ್ದೇಶನದ ಅಪೂರ್ವ ಚಿತ್ರದಲ್ಲೂ ಸುದೀಪ್ ಅಭಿನಯಿಸಿದ್ದರು.

ಕ್ಲೈಮ್ಯಾಕ್ಸ್ ನಲ್ಲಿ ಬರುವ ಸುದೀಪ್ ಪಾತ್ರ ರವಿಬೊಪ್ಪಣ ಚಿತ್ರವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಿದೆ. ನಿರ್ದೇಶನದ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿರುವುದು ಹೆಚ್ಚಿನ ಸಂತೋಷವನ್ನುಂಟುಮಾಡಿದೆ ಎಂದು ರವಿಚಂದ್ರನ್ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com