ಹಿರೋಯಿನ್ ಇಲ್ಲದ 'ಆ ದೃಶ್ಯ'ದಲ್ಲಿ ರವಿಚಂದ್ರನ್ ಅಸಾಮಾನ್ಯ ಪಾತ್ರ- ನಿರ್ದೇಶಕ ಶಿವ ಗಣೇಶ್

ನಿಗೂಢ `ಕೊಲೆಯ ಸುತ್ತ ಸಾಗುವ  ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.
ರವಿಚಂದ್ರನ್
ರವಿಚಂದ್ರನ್

ಬೆಂಗಳೂರು: ನಿಗೂಢ ಕೊಲೆಯ ಸುತ್ತ ಸಾಗುವ  ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.

ಆ ದೃಶ್ಯ ಈ ವಾರ ತೆರೆಗೆ ಅಪ್ಪಳಿಸಲಿದ್ದು, ಇದೇ ಮೊದಲ ಬಾರಿಗೆ ರವಿಚಂದ್ರನ್ ಗೆ ಜೋಡಿಯಿಲ್ಲ. ಚಿತ್ರದಲ್ಲಿ ಯಾವುದೇ ಗೀತೆಗಳಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.

ರವಿಚಂದ್ರನ್ ಸಿನಿಮಾಗಳೆಂದರೆ ಅಲ್ಲಿ ಹಿರೋಹಿನ್ ಹಾಗೂ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಆದರೆ, ಈ ಸಿನಿಮಾ ವಿಭಿನ್ನವಾಗಿದ್ದು, ಅಲ್ಲಿ ಹಿರೋಹಿನ್, ಹಾಡುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಇಲ್ಲಿ ರವಿಚಂದ್ರನ್ ಅವರ ಮತ್ತೊಂದು ಮುಖ ಅನಾವರಣಗೊಳ್ಳಲಿದೆ. 

ಈ ಬಗ್ಗೆ ಚರ್ಚಿಸಿದಾಗ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೋ ಎಂಬ ಬಗ್ಗೆ ರವಿಚಂದ್ರನ್ ಆತಂಕ ವ್ಯಕ್ತಪಡಿಸಿದ್ದರು.  ಆದರೆ, ಶೂಟಿಂಗ್ ಆರಂಭಿಸಿದಾಗ ಇದೊಂದು ಒಳ್ಳೇಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಯಸ್ಸಿನಲ್ಲಿ ಕ್ರೇಜಿಸ್ಟಾರ್ ಸರಿಯಾದ ಕಥೆ ಆಯ್ದುಕೊಂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.

ದೃಶ್ಯ ರೀತಿಯಲ್ಲಿ ಸಿನಿಮಾ ಕಥೆ ಇದೆ . ಆದರೆ , ದೃಶ್ಯದಲ್ಲಿ ಪೊಲೀಸ್ ಅಧಿಕಾರಿಗಳು ರವಿಚಂದ್ರನ್ ಅವರನ್ನು ತನಿಖೆಗೊಳಪಡಿಸುತ್ತಾರೆ. ಆದರೆ, ಆ ದೃಶ್ಯದಲ್ಲಿ ಅವರೇ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುತ್ತಾರೆ ಎಂದು ಅವರು ವಿವರಿಸಿದರು. 

ರವಿಚಂದ್ರನ್ ಅವರ ಕೆಲಸದ ಶೈಲಿ ಬಗ್ಗೆ  ಕೇಳಿದ್ದೆ. ನಂತರ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಲಾಯಿತು. ಕೆಲ ಶಾಟ್ ಗಳಲ್ಲಿ ರವಿ ಸರ್ ಸಹಾಯ ಮಾಡಿದ್ದಾರೆ. ಕ್ಯಾಮರಾ ಕೂಡಾ ಆಪರೇಟ್ ಮಾಡಿದ್ದಾರೆ. ಅವರಿಂದ ಸೂಕ್ತ ಸಲಹೆಗಳು ಬರುತ್ತಿದ್ದವು. ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು ಎಂದು ಶಿವಗಣೇಶ್ ತಿಳಿಸಿದರು. 

ಕೆ. ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಅಚ್ಯುತ್ ಕುಮಾರ್, ಚೈತ್ರಾ ಅಚಾರ್, ನಿಸಾರ್ಗ ಮತ್ತಿತರರು ನಟಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com