ಬೆಂಗಳೂರು: ನಿಗೂಢ ಕೊಲೆಯ ಸುತ್ತ ಸಾಗುವ ಆ ದೃಶ್ಯ ಸಿನಿಮಾದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಸಾಮಾನ್ಯ ಪಾತ್ರ ನಿರ್ವಹಿಸಿದ್ದಾರಂತೆ. ಹೀಗಂತಾ ಅವರೊಟ್ಟಿಗೆ ಕೆಲಸ ಮಾಡಿರುವ ನಿರ್ದೇಶಕ ಶಿವ ಗಣೇಶ್ ಹೇಳಿದ್ದಾರೆ.
ಆ ದೃಶ್ಯ ಈ ವಾರ ತೆರೆಗೆ ಅಪ್ಪಳಿಸಲಿದ್ದು, ಇದೇ ಮೊದಲ ಬಾರಿಗೆ ರವಿಚಂದ್ರನ್ ಗೆ ಜೋಡಿಯಿಲ್ಲ. ಚಿತ್ರದಲ್ಲಿ ಯಾವುದೇ ಗೀತೆಗಳಿಲ್ಲ ಎಂದು ಅವರು ಬಹಿರಂಗಪಡಿಸಿದ್ದಾರೆ.
ರವಿಚಂದ್ರನ್ ಸಿನಿಮಾಗಳೆಂದರೆ ಅಲ್ಲಿ ಹಿರೋಹಿನ್ ಹಾಗೂ ಹಾಡುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಆದರೆ, ಈ ಸಿನಿಮಾ ವಿಭಿನ್ನವಾಗಿದ್ದು, ಅಲ್ಲಿ ಹಿರೋಹಿನ್, ಹಾಡುಗಳಿಗೆ ಯಾವುದೇ ಪ್ರಾಮುಖ್ಯತೆ ನೀಡಿಲ್ಲ. ಇಲ್ಲಿ ರವಿಚಂದ್ರನ್ ಅವರ ಮತ್ತೊಂದು ಮುಖ ಅನಾವರಣಗೊಳ್ಳಲಿದೆ.
ಈ ಬಗ್ಗೆ ಚರ್ಚಿಸಿದಾಗ ಪ್ರೇಕ್ಷಕರು ಯಾವ ರೀತಿ ಸ್ಪಂದಿಸುತ್ತಾರೋ ಎಂಬ ಬಗ್ಗೆ ರವಿಚಂದ್ರನ್ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಶೂಟಿಂಗ್ ಆರಂಭಿಸಿದಾಗ ಇದೊಂದು ಒಳ್ಳೇಯ ಸಿನಿಮಾ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವಯಸ್ಸಿನಲ್ಲಿ ಕ್ರೇಜಿಸ್ಟಾರ್ ಸರಿಯಾದ ಕಥೆ ಆಯ್ದುಕೊಂಡಿದ್ದಾರೆ ಎಂದು ನಿರ್ದೇಶಕರು ತಿಳಿಸಿದರು.
ದೃಶ್ಯ ರೀತಿಯಲ್ಲಿ ಸಿನಿಮಾ ಕಥೆ ಇದೆ . ಆದರೆ , ದೃಶ್ಯದಲ್ಲಿ ಪೊಲೀಸ್ ಅಧಿಕಾರಿಗಳು ರವಿಚಂದ್ರನ್ ಅವರನ್ನು ತನಿಖೆಗೊಳಪಡಿಸುತ್ತಾರೆ. ಆದರೆ, ಆ ದೃಶ್ಯದಲ್ಲಿ ಅವರೇ ನಿವೃತ್ತ ಪೊಲೀಸ್ ಅಧಿಕಾರಿಯಾಗಿರುತ್ತಾರೆ ಎಂದು ಅವರು ವಿವರಿಸಿದರು.
ರವಿಚಂದ್ರನ್ ಅವರ ಕೆಲಸದ ಶೈಲಿ ಬಗ್ಗೆ ಕೇಳಿದ್ದೆ. ನಂತರ ಅವರೇ ಆ ಪಾತ್ರಕ್ಕೆ ಸೂಕ್ತ ಎಂದು ನಿರ್ಧರಿಸಲಾಯಿತು. ಕೆಲ ಶಾಟ್ ಗಳಲ್ಲಿ ರವಿ ಸರ್ ಸಹಾಯ ಮಾಡಿದ್ದಾರೆ. ಕ್ಯಾಮರಾ ಕೂಡಾ ಆಪರೇಟ್ ಮಾಡಿದ್ದಾರೆ. ಅವರಿಂದ ಸೂಕ್ತ ಸಲಹೆಗಳು ಬರುತ್ತಿದ್ದವು. ಅವರ ಅನುಭವಗಳನ್ನು ಹೇಳಿಕೊಳ್ಳುತ್ತಿದ್ದರು ಎಂದು ಶಿವಗಣೇಶ್ ತಿಳಿಸಿದರು.
ಕೆ. ಮಂಜು ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದು, ಅಚ್ಯುತ್ ಕುಮಾರ್, ಚೈತ್ರಾ ಅಚಾರ್, ನಿಸಾರ್ಗ ಮತ್ತಿತರರು ನಟಿಸಿದ್ದಾರೆ.
Advertisement